ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Wednesday, November 18, 2009

Seeing North Korea from by far..........!

Last week I had a trip with my friends, along with an American scholar to the Odusan Unification Observatory just north to Seoul. The observatory is located on a hill that is out in attention of the confluence of both the Imjim and Han Rivers that creates the border with North Korea. ( you can see the view below)

The observatory does provide excellent views of North Korea, but not the real North Korea!. At the opposite bank of the river we could see the collective farm apartments those are just fake buildings, but no one actually lives in! ( Fake Village). It was clear after seeing that landscape through telescope on the top of the observatory. I could not see any sign of life on the opposite bank of the river i.e North Korea. Eventhough it was around 7PM, there was no electric light, as all the buildings stands in dark!.

But green shedded hills of North Korea stands apart by considering the beauty!. it was so wonderful, even sunset was awesome. Besides North Korea, we could see the beautiful rural area of north side of South Korea. If we look at the south from the observatory the steep peaks of Korea’s most visited National Park, Bukhan Mountain is easily visible.




Except the great views, inside there is an intresting museum, displays everyday items, cloth designs of North Korea and North Korean Toys. But it was surprising to see the model of North Korean classroom and apartment, that highlights the power of JI Kim and blind faith of North Korean civiliens towards their king. After hearing so many stories, my heart feel sad about North korean people. So when I came back from observatory, even now my heart beats for them!. God grace them.........oh...finally forgot to say....it was minus 5 that evening. totally chilled....yet warmed inside by seeing wonderful location. After that we had a nice dinner (korean traditional) at my friend Angela house. ( Thanks to her for guiding, driving, caring us....)












Sunday, November 15, 2009

ಸಂಶೋದನೆಯ ಹಾದಿಯಲ್ಲಿ ಮೊದಲ ಯಶಸ್ಸು.........

ಮೊನ್ನೆ ಮೊನ್ನೆ "Young Investigator 2009 Award" ಪಡೆದಾಗ ಮನದಲ್ಲಿ ಮೂಡಿದ ಪಿಸು ಮಾತುಗಳು;
ಇನ್ನೂ ವಿದ್ಯುತ್ ಬೆಳಕು ಕಾಣದ ಎಷ್ಟೋ ಮನೆಗಳಿರುವ ಹಳ್ಳಿಯಲ್ಲಿ ಬೆಳೆದು, ಅದೇ ಹಳ್ಳಿಯ ಪ್ರೈಮರೀ ಶಾಲೆಯಲ್ಲಿ ಬಾಲ್ಯದ ದಿನಗಳನ್ನು ಕಳೆದು, ಅಷ್ಟೇನೂ ಶಿಕ್ಷಣವಂತರಲ್ಲದ ಮುಗ್ದ ತಂದೆ ತಾಯಂದಿರ ಮಡಿಲಲ್ಲಿ ಎದ್ದು ನಿಂತ ನನ್ನ ಮನಸಿಗೆ ಉನ್ನತ ಅಧ್ಯಯನದ ಬಗೆಗೆ ಕಲ್ಪನೆ ಮಾಡಲು ಸಹ ಸುತ್ತಲಿನ ಪರಿಸರದ ಪ್ರೇರಣಿಗಳಿರಲಿಲ್ಲ. ಈ ಹೊತ್ತಿಗೂ ಸ್ನಾತಕೋತ್ತರ ಅಧ್ಯಯನ ಪೂರೈಸಿದ ಒಬ್ಬರನ್ನೂ ಗುರುತಿಸಗಾಗದ ಕೂಡ್ಲು ಎಂಬ ಹಳ್ಳಿಯಿಂದ ಬಂದ ನನಗೆ ಈ ಬೆಳವಣಿಗೆ ನಿಜಕ್ಕೂ ಸಂಭ್ರಮದ ಕ್ಷ್ಣಣ. BSc ಯಲ್ಲಿ ಗಳಿಸಿದ rank, TMA Pai Gold medal, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಗಳಿಸುತ್ತಿದ್ದ ಪ್ರಶಸ್ತಿಗಳು ಕೊಟ್ಟ ಖುಷಿಗಿಂತ ಹೆಚ್ಚಿನ ಸಂಬ್ರಮ ಈ ಗಳಿಗೆಯದು. ಭಾರತದ ಮೂಲೆಯ ಹಳ್ಳಿಯಿಂದ ಸುಮಾರು 7000 Km ದೂರದ ಕೊರಿಯಾಕ್ಕೆ ಬಂದಾಗ ಮನದ ತುಂಬಾ ಬರಿ ಕನಸುಗಳು. ಆದರೆ ಆರಂಭದ ದಿನಗಳ ಕಠಿಣ ಪರಿಸ್ಥಿತಿ, ಸಾಮಾನ್ಯ ಜನರ ಜತೆಗೆ ಮಾತನಾಡಲಾಗದ ಸ್ಥಿತಿ (ಭಾಷಾ ವ್ಯತ್ಯಾಸದಿಂದಾಗಿ), ಸಂಸ್ಕ್ರತಿಯ ವ್ಯತ್ಯಾಸ, ಮೈಕೊರೆಯುವಷ್ಟು ಚಳಿ (ಚಳಿಗಾಲದ ಉಷ್ಣಾಂಶ -15 ಡಿಗ್ರೀ ಸೆಲ್ಸಿಯಸ್)........ಇವುಗಳ ಮದ್ಯೇ ಕನಸುಗಳು ಮುದುಡುವ ಭಯ. ಇನ್ನೊಂದೆಡೆ ನನ್ನನ್ನು ನಂಬಿ scholarship ಕೊಟ್ಟ ಕೊರಿಯಾ ದೇಶಕ್ಕೆ ಕೈ ಕೊಟ್ಟು ಮರಳಿ ಹೋಗಲಾರದ ಬಾವುಕ ಸ್ಥಿತಿ. ಆ ನಡುವೆ ಎಲ್ಲವನ್ನೂ ಮನದ ಮೂಲೆಗಿಟ್ಟು, ಸಂಶೋದನೆಯೊಂದೇ ನನ್ನ ಕಾಯಕ ಎಂದರಿತು ಮನಸ್ಸು ಗಟ್ಟಿ ಮಾಡಿ ಹೊಸತು ಅನ್ನಿಸಿದ ಕ್ಷೇತ್ರದಲ್ಲಿ ನನ್ನನ್ನು ತೊಡಗಿಸಿಕೊಂಡ ಆ ನಿರ್ಧಾರದ ಫಲ ಇಂದು ಕಣ್ಮುಂದಿದೆ!. Cancer Imaging Tracers ಮೇಲಿನ ನನ್ನ ಕೆಲಸವನ್ನು ಗುರುತಿಸಿ, ಹೊಸ ವಿಚಾರವನ್ನು ಗಮನಿಸಿ ನನ್ನನ್ನು ಮೇಲಿನ ಪ್ರಶಸ್ತಿಗೆ ಗುರುತಿಇರುವುದು ನನ್ನ ಮನೋಭಲವನ್ನು ಇಮ್ಮಡಿಯಾಗಿಸಿದೆ. ಈ ಕ್ಷಣದಲ್ಲಿ, ನನ್ನ ಹೆತ್ತ್ತು ಪಾಲಿಸಿದವರಿಗೆ, ಹಾರೈಷಿದ ಹಿತೈಷಿಗಳಿಗೆ, ಬೆನ್ನು ತಟ್ಟಿದ ಮನಸುಗಳಿಗೆ, ಪರೋಕ್ಷವಾಗಿ ಜೊತೆ ಸಾಗಿ ಶಕ್ತಿ ನೀಡುತ್ತಿರುವ ದೇವರಿಗೆ ನಾನು ಕ್ರತಜ್ನ.
ಆ ಗಳಿಗೆಯ ಕೆಲವು ಕ್ಯಾಮರಾ ಕ್ಷಣಗಳು ಕೆಳಗಿವೆ.....



Monday, October 26, 2009

ಮನವಿ


ಬಾ ಮೌನವೇ ಬಾ.....ಬಾ....
ಬಂದೊಮ್ಮೆ ನನ್ನಪ್ಪು
ದನಿಯ ಆರ್ಭಟವನ್ನ
ಬಳಿ ಬಂದು ಹೊರದಬ್ಬು
ಓ ಮೌನವೇ ಬಾ.....ಬಾ,.......

ಕೇಳಿ ಕರೆದವರಿಲ್ಲ
ಕಂಡು ಕೊಂಡವರಿಲ್ಲ
ನಾನಂತು ಅರಿತವನಲ್ಲ
ಎಲ್ಲ ಸತ್ಯವ ಬಲ್ಲ
ಓ ಮೌನವೇ ಬಾ,.....ಬಾ.......

ಕಳೆದಂತ ಆ ಬಾಲ್ಯ
ಕಾಡುತಿಹ ಈ ವಿರಹ
ಕತ್ತಲಿನ ಹಣಿಬರಹ
ಕರೆದು ಓಡಿಸಬಲ್ಲ
ಓ ಮೌನವೇ ಬಾ......ಬಾ.......

ಸಂಗಾತಿ ಬಲು ದೂರ
ನೋವಂತು ತಲೆಬಾರ
ಕಳೆದಿರುವ ಕನಸುಗಳ
ಮರೆಮಾಚು ಬಾವಗಳ
ಓ ಮೌನವೇ ಬಾ.....ಬಾ......

ಬಂದೊಮ್ಮೆ ನನ್ನಪ್ಪು
ಬಾ ಮೌನವೇ ಬಾ....ಬಾ......

ದಿನು

ಪರಿಹಾರ


ಗೆಳತಿ ನಿನ್ನ ನೋವಿಗೆ, ಮೌನವೊಂದೆ ಸೂಕ್ತವೇ
ನೆನಪು ಮಾತ್ರ ಸಾಲದೆ, ಅದು ಕೂಡ ಸ್ವಂತವೇ
ಅಂದು ಕೊಟ್ಟ ಬಾವನೆ, ಇಂದು ಬರಿಯ ಕಲ್ಪನೆ
ನೋಡಿ ಹೋಗು ಸುಮ್ಮನೆ, ಯಾಕೆ ಬರಿಯ ಚಿಂತನೆ

........ಕಾದ ಹಗಲು, ಅಷ್ಟು ತೊದಲು
ಬಯಕೆ ತೋಟದ ಹಂದರ
ನೀನೆ ನಾನು, ನಾನೇ ನೀನು
ಎಂಬ ಬಾವನೆ ಸುಂದರ

ಕಂಡುಕೊಂಡ ಸತ್ಯಕೆ, ಯಾಕೆ ಬರಿಯ ಹೋಲಿಕೆ
ಕಳೆದು ಹೋದ ಕಾಣಿಕೆ, ಅದುವೆ ನೋವ ಹೊದಿಕೆ
ಕದ್ದು ಕಳೆವ ಗಳಿಗೆಯಲ್ಲಿ, ಎಲ್ಲ ಮಾತು ಶೂನ್ಯ
ಓಡಿ ಬಂದು ಅಪ್ಪು ಒಮ್ಮೆ, ಕೊನೆಗೆ ಅದುವೆ ಮಾನ್ಯ

.......ಅರಿತ ಒಗಟು, ಬರಿಯ ಕನಸು
ನಿನ್ನ ನೆನಪೇ ಜೀವನ
ನಾನು ಕುರುಡು, ನೀನು ಮೌನಿ
ಸತ್ಯ ಒಂದೇ ಚೇತನ !


ದಿನು

Wednesday, September 23, 2009

ಸ್ನಾನಕ್ಕಿಂತ ಮೊದಲು ಸುಂದರವಾಗಿ ಕಾಣೋ ಹಾಗೆ!!


ಬದುಕಿನ ಕೆಲವೊಂದು ಸತ್ಯಗಳೇ ಹೀಗೆ......!

ಎಷ್ಟು ಬಾರಿ ಕೇಳಿದ್ದೇವೆ...ಸತ್ಯವನ್ನು ನುಡಿಯಬೇಕು, ನೇರ ನಡೆ-ನುಡಿಯುಳ್ಳ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು, ನಂಬಿಗಸ್ಥ ವ್ಯವಹಾರವಿರಬೇಕು...there should be a models like Gandhi......ಆದರೆ....?. ಯಾವತ್ತಾದ್ರೂ 100% ಸತ್ಯವನ್ನು follow ಮಾಡಬಲ್ಲ, ಮನಸಿಗೆ ತಪ್ಪು ಕಾಣಿಸಿದ್ದನ್ನ ನೇರವಾಗಿ ಹೇಳಬಲ್ಲ ವ್ಯಕ್ತಿತ್ವ ಬೆಳೆಸಿಕೊಂಡವರು ಆಪ್ತರಾಗಿ ಈ ಸಮಾಜದಲ್ಲಿ ಏಳಿಗೆ ಹೊಂದೋಕೆ ಸಾದ್ಯಾನಾ?....ಕೊನೇ ಪಕ್ಷ ಬದುಕಿನ ಪಥದಲ್ಲಿ upto date valued ಮನುಷ್ಯ ಅನ್ಯರಿಗಿಂತ ಬೇಗನೆ ಆಪ್ತರಾಗೋಕೆ ಸಾದ್ಯಾನಾ?....ನಿಜವಾಗಿ ಯೋಚಿಸಿದ್ರೆ ಇದು ಒಂತರಾ ಸ್ನಾನಕ್ಕಿಂತ ಮೊದಲು ಸುಂದರವಾಗಿ ಕಾಣೊ ಹಾಗೆ!, ತುರಿಕೆಯುಳ್ಳ ಗಾಯವನ್ನು ಪದೇ ಪದೇ ತುರಿಸುವಾಗ ಸಿಗುವ ಸುಖದ ಹಾಗೆ. ಒಪ್ಪಿಕೊಳ್ಳೋಕೆ ಕಷ್ಟ...ಆದರೂ ವಿಷಯ ಮಾತ್ರ ಸ್ಪಷ್ಟ. ಹಾಗಾಗಿ ಮನುಷ್ಯ ಪೂರ್ಣ ಪ್ರಮಾಣದಲ್ಲಿ detergent clean ಆಗಿ ಇದ್ದಾಗ, ಅನ್ಯರಿಗೆ ಒಳ್ಳೆಯವನಾಗಿ ಕಾಣಿಸುವುದಕ್ಕಿಂತ, ಬದುಕಿನ ಕನ್ನಡಿ ಮುಂದೆ ನಿಂತಾಗ ಅಲ್ಪ ಸ್ವಲ್ಪ ಆಚೀಚೆ ಮಾಡಬಲ್ಲ so called SMART ಮನುಷ್ಯ ಮಾತ್ರ ಈ ಸಮಾಜದಲ್ಲಿ accept ಆಗಬಲ್ಲ. ಕಡೇ ಪಕ್ಷ 100% ಸತ್ಯ, ನಂಬಿಕೆ maintain ಮಾಡೋವರಿಗಿಂತ ಉತ್ತಮ!

ಎಷ್ಟೋ ಬಾರಿ ಅಂದುಕೊಳ್ಳುತ್ತೇನೆ....ಅನ್ನಿಸಿದ್ದನ್ನ ನೇರವಾಗಿ ಹೇಳಲೇಬಾರದು, ಕಲೆ ಕಾಣಿಸಿದರೂ ಬೆಲೆ ಇದೆ ಎನ್ನುವಂತೆ ವರ್ತಿಸಬೇಕು, ಸುಂದರವಾಗಿ ಕಾಣಿಸದಿದ್ದರೂ ಗೆಳತಿ, ’How I look today?' ಎಂದಾಗ ’you look like angel' ಅನ್ನಬೇಕು, ಕೈಯಲ್ಲಿ ಅಧಿಕಾರ ಇದ್ದವರು ತಪ್ಪು ಮಾಡಿದರೂ ನೋಡದಂತೆ ಸುಮ್ಮನಿರಬೇಕು, ......ಹೀಗೆ ಹಲವು. ಆದರೂ ಸಾದ್ಯವಾಗುತ್ತಿಲ್ಲ!. ಸುಂದರವಾಗಿ ಕಾಣದ ವಸ್ತುವಿಗೆ looks great ಅನ್ನೋ ಅಭ್ಯಾಸ ಬಂದೇ ಇಲ್ಲ....ಇದರಿಂದಾಗೇ ನನಗೆ ಪೋಟೊ ಕಳಿಸುವವರ ಸಂಖ್ಯೆ ಕಡಿಮೆಯಾಗಿರಬಹುದು!. ಎಷ್ಟೇ ಆಪ್ತರಿದ್ದರೂ ತಪ್ಪಿಗೆ ತಪ್ಪು ಎಂದು ಖಂಡಿಸಿದ್ದರಿಂದಲೇ ಸಂಬಂದಗಳ ನಡುವೆ ಮೌನದ ಅಂತರ ಜಾಸ್ತಿಯಾಗತೊಡಗಿದೆ. Senior ಅಂದುಕೊಂಡವರ ಹುಂಬು ಜ್ನಾನಕ್ಕೆ, ಅವರು ತಿಳಿ ಹೇಳುವ ನಿರ್ಧಾರಕ್ಕೆ ಪ್ರತಿಭಟಿಸಿ ಅವರ ದ್ರಷ್ಟಿಯಲ್ಲಿ ಒಂತರಾ biased target ಆದ ಅನುಭವಗಳು ಹಲವು. ಇದು ನನ್ನೊಬ್ಬನ ಬದುಕಿನ ಸತ್ಯವಲ್ಲ. ಬಹುಶ: ಬಹುತೇಕ ಎಲ್ಲರ ಬದುಕಿನಲ್ಲೂ ನಡೆದಿರಬಹುದಾದ ಅಂಶಗಳು. ಸಾಮಾಜಿಕವಾಗಿ ಎಲ್ಲರಿಂದಲೂ ಭೇಷ್ ಅನ್ನಿಸಿಕೊಳ್ಳಬೇಕಾದರೆ ಎರಡು ಮಾರ್ಗ ಸ್ಪಷ್ಟ, ಅನ್ನಿಸಿದ್ದನ್ನ ಹೇಳದೆ ಮೌನವಾಗಿ ಇರುವಂತದ್ದು......ಇಲ್ಲವಾದಲ್ಲಿ ಅನ್ನಿಸಿದ್ದನ್ನ ಬಿಟ್ಟು ಬಣ್ಣ ಹಚ್ಚಿ ಮಾತನಾಡುವಂತದ್ದು. ಎರಡೂ ಸಾದ್ಯವಾಗದಿದ್ದಲ್ಲಿ ನನ್ನ ತರಹ ನಿಷ್ಠುರ ಹುಡುಗ ಅನ್ನೋ ಬಿರುದು ಪಡೆಯಕೊಳ್ಳಬೇಕಾದೀತು!!.

ನಿಷ್ಠುರವಾದ ಸತ್ಯದ ಪರಿಧಿಯಲ್ಲಿ ಒಳಿತಿನ ಅಂಶವಾದರೂ, ದೈನಂದಿನ ಬದುಕಿನಲ್ಲಿ 'SMART' ಅನ್ನಿಸಿಕೊಳ್ಳಲಾಗದು. ಅನುಭವದ ನೆಲೆಯಲ್ಲಿ, ಇಂದಿನ ಸಂಬಂದಗಳ ನಡುವೆ ನಿಷ್ಠುರ ಸತ್ಯಕ್ಕಿಂತ, ಸಿಹಿ ಸುಳ್ಳು ಆಪ್ತವೆನಿಸುತ್ತೆ. ನೇರ ನಡವಳಿಕೆಯಿಂದ ಕೊನೆಗೆ self-comfort ಕೂಡ ಸಿಗದು ಅನ್ನೋವಂತಾ ಸ್ಥಿತಿ ನಿರ್ಮಾಣವಾಗುತ್ತೆ. ಯಾವತ್ತಾದ್ರು ನಮ್ಮವರು ಅಂದುಕೊಂಡವರಿಗಾಗುವ ಬೇಸರ, ಗೌರವ ಕೊಡುವ ವ್ಯಕ್ತಿಗಳಿಗಾಗುವ ಮುನಿಸು ಮನಸಿಗೆ ಸಂತೋಷ ಕೊಡೋಕೆ ಸಾದ್ಯಾನಾ?...ಆದರೊಂದು ಮಾತು, ಸ್ನಾನಕ್ಕಿಂತ ಮೊದಲಿನ ಸೌಂದರ್ಯ ಹೆಚ್ಚು ಹೊತ್ತು ಉಳಿಯದು, ಅಂತೆಯೇ ವಾಸ್ತವದ ಮೇಲ್ಮೈ ಹೊದಿಕೆ ಹೆಚ್ಚು ದಿನ ಸಂಬಂದವನ್ನು ನಿರ್ಮಿಸದು. ಹಾಗಾಗಿ ಸುಳ್ಳು ಇನ್ನೊಬ್ಬರನ್ನ ನೋಯಿಸದಿರಲಿ, ಹೊಗಳಿಕೆ ಇನ್ನೊಬ್ಬರ ಕಾರ್ಯ ಪಥವನ್ನು divert ಮಾಡದಿರಲಿ, ಸಮಜಾಯಿಸುವ ಮಾತು ಕಾರ್ಯ ತತ್ಪರತೆಗೆ ಅಡ್ಡಿಯಾಗದಿರಲಿ......ಅಷ್ಟಕ್ಕೂ ನಮ್ಮ ಮನಸಿಗೆ ಹತ್ತಿರವಾದವರ ದುರ್ಬಲತೆ ನಾವು ಕೇಳದೆ diplomatic ಆಗಿದ್ರೆ ಅದನ್ನ ಹೇಳೊದಾದ್ರೂ ಯಾರು? ......ಇಷ್ಟೆಲ್ಲ ಗೊಂದಲ ನಡುವೆ ಎಲ್ಲವನ್ನ ನಿಭಾಯಿಸಬಲ್ಲ ’SMART' ವ್ಯಕ್ತಿತ್ವ ನಮ್ಮದಾಗಿರಲಿ!
ದಿನು:)

Thursday, September 10, 2009

ಹುಚ್ಚಿನಲ್ಲಿ ಸತ್ಯವಿದೆ ಗೊತ್ತಾ?!



ಒಂದೇ ಸವನೆ ಒಟ ಒಟ ಮಾತು, ನಾಲಗೆಯಂಚಿನಲ್ಲಿ ಅದರುತ್ತಿದ್ದ ತುಂತುರು, ಏನೋ ಕಳೆದಂತೆ ವ್ಯಕ್ತವಾಗುತ್ತಿದ್ದ ಮರೀಚಿಕೆ......ಭೂತ ತಪ್ಪಿಸಿಕೊಂಡಂತೆ ಹಿಂದಕ್ಕೆ ಓಡುವ, ಭವಿಷ್ಯವನ್ನು ಬಾಚಿಕೊಳ್ಳುವ ತವಕದಲ್ಲಿರುವಂತೆ ಮುಂದಕ್ಕೆ ಓಡುವ ಆ ಮನುಷ್ಯನಿಗೆ ಭೂತ-ಭವಿಷ್ಯಗಳ ಕಲ್ಪನೆ ಇರಲಿಕ್ಕಿಲ್ಲ. ಹರಿದ ಬಟ್ಟೆಯಲ್ಲಿ ಆಚೀಚೆ ಓಡಾಡುತ್ತಿದ್ದ ಅರೆ ಹುಚ್ಚನನ್ನು ಕಂಡಾಗ ಮನದಲ್ಲಿ ತುಡಿದ ಮಾತುಗಳಿವು.
ಹುಚ್ಚು...ಹಲವು ಬಗೆಯದ್ದು!. ವೈಜ್ನಾನಿಕ ಭಾಷೆಯಲ್ಲಿ ಇದು psychotic disorder. (like organic brain syndromes, schizophrenia, bipolar disorder etc). ಮಾನವೀಯ ಭೂಮಿಕೆಯಲ್ಲಿ ಕರುಣಾಜನಕ ಸ್ಥಿತಿ......ಇನ್ನು ಆಡುಭಾಷೆಯನ್ನಾಡುವ ಬಾಯಿಗಳಲ್ಲಿ ಮನುಷ್ಯನ ಪಾಪಕ್ಕೆ ದೇವರು ಕೊಟ್ಟ ಶಾಪ!. ಆದರೆ....ಒಂದು ಮಾತು.....ಯಾವ ಇತಿಹಾಸದಲ್ಲೂ, ವೈದಿಕತೆಯಲ್ಲೂ ಮನುಷ್ಯನ ಪಾಪಕ್ಕಾಗಿ ಹುಚ್ಚನಾಗು ಎನ್ನುವ ಶಾಪ ಕೊಟ್ಟ ನಿದರ್ಶನಗಳಿಲ್ಲ...ಹಾಗಾಗಿ ಈ ಬಗೆಯ ಆಡು ಮಾತುಗಳು ಮನುಷ್ಯನ ಇನ್ನೊಂದು ಬಗೆಯ ಹುಚ್ಚಿಗೆ ಸೇರುವಂತದ್ದು !. ಆದರೆ ನನ್ನ ಈ ಬರಹ ವೈಜ್ನಾನಿಕ ಪರಿದಿಯನ್ನ ಮೀರಿದ ಹುಚ್ಚು...ಯಾಕೆ ಇದು ಕಾಣಿಸಿಕೊಳ್ಳುತ್ತೆ ಎಂದು ಹೇಳಲಾಗದ ಹುಚ್ಚು
ಬಹುಷ: ಬದುಕಿನ ದಿಶೆಯಲ್ಲಿ ಸತ್ಯದ ಹೊರಳಾಟ ನಾಲಗೆಯಲ್ಲಿ ತೊದಲುವ ಸ್ಥಿತಿ ಕೂಡ ಹುಚ್ಚು!. ಈ ಬಗೆಯ ಹುಚ್ಚು ಏನೋ ಬೇಕೆಂಬ ಅತೀವ ಹಂಬಲ, ಬಯಕೆ, ಆಶೆ, ಆಕಾಂಕ್ಷೆ, ಅಭಿಪ್ಸೆ, ಚಪಲ ..........ಹೀಗೆ ಹಲವು ಬಗೆಯಲ್ಲಿ ವ್ಯಾಪಿಸಿಕೊಳ್ಳುತ್ತೆ. ಇದು ಒಂತರಾ..ಒಂದು ಸಿಗರೇಟಿಗೋಸ್ಕರ ನಾಲ್ಕೈದು ಮೈಲಿ ನಡೆದು ಸೇದಲೇ ಬೇಕೆನ್ನುವ ಮನ:ಸ್ಥಿತಿ !. ಮನೆಯಡುಗೆ ಬಿಟ್ಟು ಹೊರಗಡೆ ತಿನ್ನಬೇಕೆನಿಸುವ ಹುಚ್ಚು ಮನಸು, ಗಂಟೆಗಟ್ಟಲೆ ಮಾತನಾಡಿದರೂ ಮತ್ತೆ ಮನಸಿಗೆ ಬೇಸರ ಮಾಡಿಕೊಳ್ಳುವ ಪ್ರಿಯತಮ/ಮೆ, ಮನೆ ಮಕ್ಕಳು ಅಳುತ್ತಿದ್ದರೂ ದುಡಿದ ದುಡ್ಡಿನಲ್ಲಿ ಮದ್ಯ ಕುಡಿಯಬೇಕೆನ್ನಿಸುವ ಚಟ, ಬದುಕನ್ನೇ ಮರೆತು ಏನೇನೋ ಸಾಧಿಸಹೊರಟ ಎಷ್ಟೋ ಮನಸುಗಳು............ಇವೆಲ್ಲ ಅರ್ಥವಿಲ್ಲದ ವರ್ತನೆಗಳಲ್ಲ. ಅನುಕರಣಿ ಸಹ ಅಲ್ಲ. ಇದನ್ನು ಕೇಳುವ ಭರದಲ್ಲಿ ಅವನಿಗೆ/ಅವಳಿಗೆ ’ಹುಚ್ಚು’ ಅಷ್ಟೆ ಎನ್ನುವ ಮಾತು ಸಹ ಸಹಜ. ಆದರೆ ಇವೆಲ್ಲಾ ಸತ್ಯವಿಲ್ಲದ ಹುಚ್ಚುಗಳೇ?......ಉತ್ತರ ಜಟಿಲ!. ಸ್ಥೂಲ ಯೋಚನೆ ನಮ್ಮನ್ನು ದ್ವಂದ್ವ ಬಾವಕ್ಕೆ ತಳ್ಳಬಹುದು. ನಮ್ಮದಲ್ಲದ್ದನ್ನ ನಮ್ಮದು ಅಂದುಕೊಳ್ಳುವಂತದ್ದು, ನಮ್ಮದಾಗಿಹ ವಸ್ತು ಹತ್ತಿರವಿದ್ದಾಗ ಗಮನಿಸದೆ, ದೂರವಾದಾಗ ’miss' ಮಾಡಿ ಅಳುವಂತದ್ದು, ನಾಳಿನ ಬಗೆಗೆ ಅತಿಯಾದ ಯೋಚನೆ ಒಳಿತಲ್ಲ ಎಂದು ಎಷ್ಟು ಬಾರಿ ಯೋಚಿಸಿದರೂ, e-mail forward ಮಾಡಿದರೂ...ನನ್ನ ಉದ್ಯೋಗ ಖಾತ್ರಿಯೋ, ಅಲ್ಲವೋ ಎಂಬ ಬಗ್ಗೆ ಚಿಂತಿಸುವಂತದ್ದು....ಎಲ್ಲವೂ ಅರ್ಥವಿಲ್ಲದ ಹುಚ್ಚು ವರ್ತನೆಗಳಾ?.

ಕಾಣದ ದಿನಗಳ ಬಗೆಗೆ ಕನಸಿನ ಸೌಧ ಕಟ್ಟುವಂತದ್ದು ಕೂಡ ಸತ್ಯವುಳ್ಳ ಹುಚ್ಚು!. ಒಂದೆಡೆ ’we should dream'....ಇನ್ನೊಂದೆಡೆ, ’dream with limitations', ಹಾಸಿಗೆ ಇದ್ದಷ್ಟು ಕಾಲು ಚಾಚು......ooopsss....ದ್ವಂದ್ವ!. ಈ ದ್ವಂದ್ವಗಳೇ ನಮ್ಮನ್ನ ಹುಚ್ಚು ಬಾವನೆಗಳತ್ತ ಕೊಂಡೊಯ್ಯುವ ಅಂಶಗಳು. ದ್ವಂದ್ವ ಬಾವನೆ without frame ಸ್ಪಷ್ಟತೆಯಿಲ್ಲದ ಸತ್ಯ. ಸತ್ಯ ಇದ್ದರೂ ಸತ್ವ ಕೊಡಲಾಗದ ಸ್ಥಿತಿ. ಎಷ್ಟೋ ಬಾರಿ ನಾವು ಕೈಗೊಳ್ಳುವ ನಿರ್ದಾರಗಳು ಹುಚ್ಚು ಎನ್ನಿಸುವಂತದ್ದು ಸ್ಪಷ್ಟತೆಯ ಕೊರತೆಯಿಂದಾಗಿ. PUC ಮುಗಿಸಿದಾಗ ಪದವಿ ಕಾಲೇಜು ಸೇರುವ ಮೊದಲು professional and unprofessional ಕೋರ್ಸ್ ಗಳ ನಡುವೆ ದ್ವಂದ್ವ ಇರುತ್ತೆ. ಇಷ್ಟಿದ್ದೂ ಪದವಿ ಆಯ್ಕೆ ಮಾಡಿದ ಜನರನ್ನು ನೋಡಿ ಹುಚ್ಚು ಹುಡುಗ/ಗಿ...ಎಂಜಿನಿಯರಿಂಗ್ ಮಾಡಬಹುದಿತ್ತು ಎನ್ನುವಾಗ ಆ ಹುಡುಗನ(ಗಿಯ) ನಿರ್ಧಾರದಲ್ಲಿ ಸತ್ಯವಿದೆ ಅನ್ನಿಸಲ್ವಾ?. ಕೈ ತುಂಬಾ ಹಣ..ಕಾರು, ಮನೆ, ನೋಡೊಕೆ ಒಂದಷ್ಟು ರೂಪ ಎಲ್ಲಾನು ಇರೊ proposal ಬಿಟ್ಟು, ಪಕ್ಕದ್ಮನೆ ಮಂಜು ಜೊತೆ ಓಡಿ ಹೋದ್ಲು ಹುಚ್ಚು ಹುಡುಗಿ ಅನ್ನೋವಾಗ, ಆ ತೀವ್ರತೆಗೆ ಅವಳ ಪ್ರೀತಿ ಕಾರಣವಾಗಿತ್ತು, ಆ ಪ್ರೀತಿಯಲ್ಲಿ ಸತ್ಯವಿತ್ತು ಅನ್ನಿಸಲ್ವಾ?. ಕೈ ತುಂಬಾ ಹಣ ಮಾಡಬಹುದಿತ್ತು...ಅಮೇರಿಕದಲ್ಲಿದವ್ನು ಊರು ಕಡೆ ಬಂದು ಎಲ್ಲಾನು ಹಾಳು ಮಾಡ್ಕೊಂಡ್ರು ಎಂದು ಮೂದಲಿಸುವ ಹೆಂಡತಿಗೆ ಗಂಡನ patriotic-self comfort ಹುಚ್ಚು ಅನ್ನಿಸುತ್ತೆ...ಆದರೆ ಆ ಹುಚ್ಚಿನಲ್ಲಿ ಸತ್ಯ ಇಲ್ವಾ?. ಅಪ್ಪ-ಅಮ್ಮ ಎಷ್ಟೇ ಬೊಬ್ಬೆ ಹೊಡೆದರೂ, ಶಾರುಕ್ ಖಾನ್ ನಡೆ-ನುಡಿ ಅನುಸರಿಸುವ ಹುಡುಗನನ್ನು ಕಂಡಾಗ ಹುಚ್ಚು ಎನ್ನಿಸಿದರೂ, ಸತ್ಯವೆನಿಸಿದ ಒಂದು devotion ಇದೆ ಅನ್ನಿಸಲ್ವಾ?........ಹೀಗೆ ಎಷ್ಟೋ ಹುಚ್ಚು ವರ್ತನೆಗಳ ನಡುವೆ ಅಳಿಸಲಾಗದ, ಅರ್ಥವಾಗದ ಸತ್ಯವಿದೆ ಅನ್ನಿಸುತ್ತೆ. ಅಷ್ಟಕ್ಕೂ ಸಮಯ ಸಿಕ್ಕಾಗಲೆಲ್ಲಾ ಮನಸಿಗೆ ಬಂದದ್ದನ್ನು ಬರೆಯುವ ನನ್ನ ಹುಚ್ಚು ಬಾವನೆಗಳ ನಡುವೆ ನನಗೆಲ್ಲೋ ಸಂತ್ರಪ್ತಿಯ ಸತ್ಯವಿದೆ....ಒಂಟಿತನದ ಆಸರೆಯಿದೆ!. ಕೊನೆಗೊಂದು ಮಾತು,......there is sure truth behind my madness!!.

dinu :)

Sunday, August 30, 2009

ನೆನಪುಗಳೆಲ್ಲವೂ ಸ್ವಂತದ್ದಲ್ಲ!!


ಎಷ್ಟು ಬಾರಿ ಯೋಚಿಸಿದ್ದೆವೊ ಗೊತ್ತಿಲ್ಲ....ಪ್ರತಿ ಬಾರಿ ಯೋಚಿಸಿದಾಗಲೂ ಮನದ ಮೂಲೆಯಲ್ಲೆಲ್ಲೊ ನೋವು, ಹತಾಶೆ, ಸಂತಸ. ಬದುಕ ಗೂಡಿನೊಳಗೆ ಅದೇನೋ ಚಿಲಿಪಿಲಿ. ಅಂದು ನಡೆದು ಹೋದ ಸತ್ಯ, ಎಲ್ಲೋ ನುಣುಚಿಕೊಂಡ ಬೀಸುದೊಣ್ಣಿ, ಪ್ರೀತಿಯ ಅಪ್ಪುಗೆಯಲ್ಲಿ ಬದುಕನ್ನು ನಿಮಿಷವೆಂದುಕೊಂಡಿದ್ದ ಗಳಿಗೆ, ಕಂಡು ಕಾಣದಿದ್ದ ಬಿಸಿ ಹಗಲ ಊಟ, ಬಣ್ಣದ ಬಲೂನಿನೊಂದಿಗೆ ಕಾರಂಜಿಯಾಗಿದ್ದ ಬಯಕೆ, ಅಮ್ಮನ ಸೆರಗಿನಿಂದ ಕದ್ದೋಡಿ ತಿಂದ ಬೆಲ್ಲದ ಕ್ಯಾಂಡಿ, ಅಪ್ಪ ಕೊಟ್ಟ ದುಡ್ಡನ್ನು ಚಾಚು ತಪ್ಪದೆ ತೆಗೆದಿಟ್ಟ ತೊಟ್ಟಿಲಾಟ........oopss...ಅದೆಷ್ಟು ನೆನಪುಗಳು...ಬರೆಯಲಾಗದಷ್ಟು...ಕೊನೆ ಕೊನೆಗೆ ನೆನಪಿಸಿ ಮುಗಿಯಲಾರದಷ್ಟು ನೆನಪುಗಳು!

ಅದ್ಯಾಕೊ ಒಂದು ಕ್ಷಣ.....ಎಲ್ಲ ಸತ್ಯಗಳು ನಮ್ಮದಲ್ಲ ಅನ್ನಿಸತೊಡಗುತ್ತೆ...ಸಮಯ ಸರಿದಂತೆ ನೆನಪುಗಳೆಲ್ಲವೂ ಸ್ವಂತದ್ದಲ್ಲ ಅನ್ನಿಸುತ್ತೆ!. ಅಂದೇ ಅಂದುಕೊಂಡಿದ್ದೆ..ತಪ್ಪಿಯೂ ಮತ್ತೆ ನೆನಪಿಸಿಕೊಳ್ಳಬಾರದೆಂದು. ಎಷ್ಟೋ ಬಾರಿ, ’ಯಾಕಿಷ್ಟು ಕಿರಿಕಿರಿ, ಮತ್ತ್ಯಾಕೆ ಕಾಡುತ್ತಿ?’ ಎಂದು ಬಾವನೆಗಳಿಗೆ ಬೈದಿದ್ದೆ. ಕಣ್ಣು, ಕಿವಿ, ಮೂಗು, ಬಾಯಿ ಎಲ್ಲಾ ಮುಚ್ಚಿ ಎಲ್ಲೂ ನುಸುಳಬಾರದೆಂದುಕೊಂಡಿದ್ದೆ. ’ಯಾಕಪ್ಪಾ? ಅನ್ನೋದಾದ್ರೆ, ಅದು ನನ್ನ ಸ್ವಂತದ್ದಲ್ಲ ಸ್ವಾಮಿ’ ಅನ್ನಬೇಕಷ್ಟೆ. ನೀನಂದು ಆಡಿದ್ದ ಒಂದು ಮಾತು ನನ್ನ ಬದುಕಿನ ಕನಸುಗಳನ್ನು ಉಯ್ಯಾಲೆಯಾಗಿಸಿತ್ತು. ನಾನೇ ಕಟ್ಟಿಕೊಂಡಿದ್ದ ನನ್ನದೇ ಬದುಕ ಸೌಧಕ್ಕೆ ಫಿರಂಗಿಯಾಗಿತ್ತು. ಇಷ್ಟಿದ್ದೂ ನನ್ನದಲ್ಲದ ತಪ್ಪಿಗೆ ಬದುಕನ್ನು ಅಳಿಸಿದ ನೆನಪು ನನ್ನದಾಗುವುದಾದರೂ ಹೇಗೆ?. ನನಗಿಲ್ಲಿ ನೋವಿಡುವ ಈ ನೆನಪು, ನಿನಗಲ್ಲಿ ಸಂತೋಷ ಕೊಡುತ್ತದೆ ಎಂದಾದರೆ ಈ ನೆನಪು ಯಾರದ್ದು?. ನಿನ್ನ ಸ್ವಂತದ್ದೇ ಆದರೆ ಮತ್ತೆ ಮತ್ತೆ ಕಾಡುವ ಪರಿಯಾದರೂ ಏನು?

ಆ ಹೊತ್ತು ಹೇಳಿದ್ದ ನೆನಪು. ನಾನು ತಿಳಿದವನು, ಬದುಕನ್ನು ಅರ್ಥವಿಸಿಕೊಂಡವನು....so called sensual smart man. ಅದಕ್ಕಾಗೆ ನನ್ನ ಮಾತುಗಳನ್ನ ವೇದವಾಕ್ಯ ಅಂದುಕೊಳ್ಳುತ್ತಿದ್ದಿ. ಈಗೀಗ ಆ ವೇದಕ್ಕೇನಾಯಿತು?. ನೀನಂದುಕೊಡಿದ್ದ ನಿನ್ನದೇ ಮಾತುಗಳು ನಿನಗೀಗ ಸರಿ ಕಾಣಿಸದಿದ್ದಾಗ ಕಾಲ್ಕೆದರಿ ಎದುರು ನಿಲ್ಲುವ ನಿನ್ನ ವರ್ತನೆ ಸತ್ಯವೋ, ಸುಳ್ಳೋ...ಆ ಮಾತು ಒತ್ತಟ್ಟಿಗಿರಲಿ. ಆ ಗಳಿಗೆ ನಿನ್ನ ಮಾತು ನಿನಗೀಗ ಸರಿಯಿಲ್ಲ ಅನ್ನೋದಾದರೆ, ಆ ಗಳಿಗೆಯ ಬಾವನೆಗಳೇ ಸುಳ್ಳು ಎನ್ನೋದಾದರೆ ಈ ನನ್ನ ನೆನಪು ಮುಂದೆ ಸ್ವಂತದಾಗುವುದಾದರೂ ಹೇಗೆ?

ಎಲ್ಲವೂ ಹೀಗೆ ಕಣಿ...ನಮ್ಮದು ಎಂದಾದ ಎಲ್ಲ ಬಾವನೆಗಳಲ್ಲೂ ಸರಿ ಸಮನಾದ ಪಾಲು ಎಲ್ಲ ಸಮಯದಲ್ಲೂ ಇರದು. ಎಷ್ಟೋ ಬಾರಿ ನಾನಂದುಕೊಡಿದ್ದ ನನ್ನದೇ ಕಲ್ಪನೆಗಳು, ನೀನಂದುಕೊಂಡಿದ್ದ ನಿನ್ನದೇ ಕನಸುಗಳು, ಯಾರೋ ಹೇಳಿದಾಗ ಸರಿ ಎನಿಸಿದ ಎಷ್ಟೋ ಘಟನೆಗಳು....ಕೆಲವೊಂದು ನಿನ ಸ್ವಂತದ್ದು...ಇನ್ನಷ್ಟು ನನ್ನದು!. ನಾನು ಜೀವಿಸೀದೆ ಒಂತರಾ ಹೀಗೆ ಕಣಿ.....ನಿನ್ನದಾಗಿಹ ಘಟನೆಗಳನ್ನು ನನ್ನ ವ್ಯಾಪ್ತಿಯಲ್ಲಿಟ್ಟು, ನನಗೆ ಬೇಕಾದಷ್ಟು ಮಾತ್ರ ಸ್ವಿಕರಿಸಿದ್ದೇನೆ. ನೀನು ಕೂಡ ಅಷ್ಟೇ ಮಾಡು. ಇದನ್ನ ನನ್ನ ನಿರ್ಲಿಪ್ತತೆ, ನಾನು ಎಲ್ಲದನ್ನ ಹಂಚಿಕೊಳ್ಳದವ....ಅನ್ನೋದಾದರೆ ನಿನ್ನ ಸ್ವಂತದ ನೆನಪಿಗೆ ನಾನು ಮುನ್ನುಡಿಯಾಗಬೇಕಷ್ಟೆ. ಅದು ಬದುಕ ಈ ಹಂತದಲ್ಲಿ ನನಗೆ ತುಂಬಾನೆ ಕಷ್ಟ ಕಣಿ... ಒಂದು ಮುಂಜಾವಿನ ಸಮಯ, ಇನ್ನೊಂದು ತೆರೆದ ಹಗಲು ಅಥವಾ ಮುದುಡಿದ ತಂಗಾಳಿಯ ನಡುವೆ ನಿನ್ನಾವುದೋ ನೆನಪುಗಳನ್ನ ನೆನಪಿಸಿಕೊಳ್ಳದ ತಪ್ಪಿಗೆ,’ನೀನೆಷ್ಟು ಕ್ರೂರಿ, ಎಲ್ಲವನ್ನ ಹಂಚಿಕೊಂಡೆ ಇಲ್ಲ...’ ಎನ್ನುವ ನಿನ್ನ ಮಾತಿಗೆ ನನ್ನದೊಂದೇ ಉತ್ತರ ಕಣಿ...ಬದುಕಿನ ನನ್ನ ವ್ಯಾಪ್ತಿಯೆ ಬೇರೆ. ನಿನ್ನ ಎಷ್ಟೋ ನೆನಪುಗಳು ನನ್ನದಲ್ಲ. ಅಷ್ಟೇ ಯಾಕೆ...ನನ್ನ ಎಷ್ಟೋ ನೆನಪುಗಳು ನನ್ನ ಸ್ವಂತದ್ದಲ್ಲ!. ಈ ಉತ್ತರ ಕೇಳುವ ಹೊತ್ತಿಗೆ ...’ಹುಚ್ಚು ಹುಡುಗ...ಹೇಳಿದ್ದನ್ನ ಒಪ್ಪಿಕೊಳ್ಳೋದೆ ಇಲ್ಲ’ ಎಂದು ನೀನು ಗೊಣಗುತ್ತಿರುತ್ತಿ......ಆಗ ನಗುತ್ತಿಯೋ, ಅಳುತ್ತಿಯೋ...ಆ ನೆನಪು ಮಾತ್ರ ನಿನ್ನ ಸ್ವಂತದ್ದು :)

Imaginatory writing.........dinu

Friday, August 21, 2009

Haeundae beach visit...............

Recently had a chance to visit a lovely place in South korea......really awesome................true sense of nature beuty!. Haeundae beach is located in Busan metropolitan city, which is one of famous beach with around 12km coastline. As it was summer, people were packed like baloons with lot of color. By candour at one glance...I was totally surprized to see a big gathering.... whole korean population planned to stay like human tail in that narrow strip..!!!. Not surprisingly, I enjoyed each minute of my stay.....feel like people forgot everything by seeing nature !!. Apart from that, some how....by seeing that modern environment...I felt like...we are back to history?? or forgot everything while enjoying happyness?? or Is only enjoyment is culture....? .....still searching for answers...!! (you can see some moments here.....!










Wednesday, August 19, 2009

ಬರಿ ಬೋರು ಕಣೆ ಲೀನಾ...............................!!


[8 ವರ್ಷಗಳ ಹಿಂದೆ ವಿಜಯ ಕರ್ನಾಟಕ ಪತ್ರಿಕೆಯ ’ಯುವ ವಿಜಯ’ ವಿಭಾಗದಲ್ಲಿ ಪ್ರಕಟಗೊಂಡಿದ್ದ ನನ್ನ ಬರಹ !]


‘ಹಲೋ ಬಾಲು, ಇಲ್ಲೇನ್ಮಾಡ್ತಿ?‘, ಕಾಲೇಜಿನ ಕಾರಿಡಾರಿನಲ್ಲಿ ತಲೆಕೆದರಿಕೊಳ್ಳುತ್ತ ಅದೇನೋ ಗೊತ್ತು ಗುರಿಯಿಲ್ಲದಂತೆ ನಿಂತಿದ್ದ ಬಾಲುವನ್ನು ಕೇಳಿದಾಗ,"ಏನಿಲ್ಲ ದಿನು, ಬರೀ ಬೋರು.....ಟೈಮ್ ಪಾಸ್ ಆಗೋದೆ ಇಲ್ಲ ಮರಾಯ‘ ಎಂದಾಗ ಯಾಕೆ ಕ್ಲಾಸಿರ್ಲಿಲ್ವ? ಎಂದೆ. ‘ಇಲ್ಲಪ್ಪ ಬರೀ ಬೋರು, language class, ಹಾಗಾಗಿ ಬಂಕ್ (absent) ಹಾಕಿದೆ, ಕ್ಲಾಸಲ್ಲೂ ಬೋರು, ಹೊರಗಡೆ ಬಂದ್ರೆ ಇಲ್ಲೂ ಬೋರು ಎಂದು ವಿಶ್ರಾಂತಿ ಕೊಠಡಿಯತ್ತ ತೆರಳಿದ ಬಾಲುವಿನ ತೊಂದರೆ ಅವನದೊಬ್ಬನದೇ ಅಲ್ಲ. ಸಹಸ್ರ ವಿದ್ಯಾರ್ಥಿಗಳ ಅರ್ಥವಿಲ್ಲದ ಗೋಳು. ಇದರ ಜೊತೆಗೆ ಇನ್ನು, ‘ಯಾಕೆ ಮಾತಾಡ್ತ ಕುಳಿತ್ಕೊಳ್ತ್ತಿರಿ?‘ ಎಂದು ಯಾರದ್ರೂ ವಿದ್ಯಾರ್ಥಿಗಳನ್ನು ಕೇಳಿದಾಗ ಬರುವ ಉತ್ತರ ಒಂದೇ.......Time pass ಮಾಡೋಕೆ. ಯಾಕೆ reading room ಇಲ್ವಾ ಎಂದಾಗ ಅಲ್ಲಿ time pass ಆಗೋದೆ ಇಲ್ಲ ಎನ್ನುವಾಗ ಅವರು ಊಟ ಮಾಡುವುದು, ಕಾರಿಡಾರಿನಲ್ಲಿ ಪಥಸಂಚಲನ ಮಾಡುವುದು, ಕೆಲವು ಹುಡುಗಿಯರ ಗೋಳು ಹೊಯ್ದುಕೊಳ್ಳುವಂತದ್ದು ಎಲ್ಲವೂ time pass ಗಾಗಿ. ಇದನ್ನೆಲ್ಲಾ ನೋಡುವಾಗ ಯಾಕಾದ್ರೂ ಆ ಬಗ್ಗೆ ಯುವ ಮನಸ್ಸು ಚಿಂತಿಸುತ್ತೆ ಅನ್ನೋದೆ ಒಗಟಾಗಿ ಉಳಿಯುತ್ತೆ. time ಅದರಷ್ಟಕ್ಕೆ ಚಲಿಸುತ್ತೆ.....ಆ 4th dimension (4D) ವಿಷಯದ ಬಗ್ಗೆ ಯುವ ಜನತೆ ಇಷ್ಟು ಕಾಳಜಿ ವಹಿಸಿ ಪ್ರಯೋಜನವಿಲ್ಲದ ಚಿಂತನೆ ನಡೆಸುತ್ತಾರೆ ಎನ್ನುವಂತದ್ದು ದೊಡ್ಡ ಪ್ರಶ್ನೆ!. ಈ ಚಿಕ್ಕ ಆದರೆ ಸೂಕ್ಷ್ಮ ಒಗಟನ್ನು ಬಿಡಿಸಹೊರಟಾಗ, time pass ಮಾಡುವ extra ಜವಾಬ್ದಾರಿ ಯುವ ಹೆಗಲಿಗೆ ಬೀಳಲು ಕೆಲವು ಕಾರಣಗಳನ್ನು ಗುರುತಿಸಬಹುದು.


ಮೊದಲನೆಯ ಮನ:ಶಾಸ್ತ್ರೀಯ ಅಂಶವೆಂದರೆ, ಸಮಯವನ್ನು ನಾವೇ ತಲೆ ಮೇಲೆ ಹೊತ್ತು ಮಾರಾಟಕ್ಕೆ ಇಟ್ಟುಕೊಂಡಂತೆ ಗ್ರಹಿಸಿಕೊಂಡಿರುವುದು. ಯಾವುದೇ ಒಂದು ವಿಷಯದಲ್ಲಿ ಪೂರ್ತಿ ತನ್ಮಯತೆಯಿಂದ ಕೂಡಿರುವವರಿಗೆ ಸಮಯದ ಉಳಿಕೆಯ ಬಗೆಗೆ ತಲೆ ಬಿಸಿ ಇರುತ್ತದೆಯೇ ಹೊರತು ಸಮಯದ ಕಳೆಯುವಿಕೆಯ ಬಗೆಗಲ್ಲ. ಮನಸ್ಸಿನಲ್ಲಿ ಬೇರಾವ ವಿಷಯವನ್ನು ಗ್ರಹಿಸದೆ ಕೇವಲ ಸಮಯ ಕಳೆಯುವುದಷ್ಟೇ ಉದ್ಯೋಗವಾದಾಗ ಈ pass ಮಾಡುವ loss job ಕೈಗೆ ಸಿಗುತ್ತೆ. ಇತರರಿಗಿದು ಅನ್ಯತ್ರ ಅಲಭ್ಯ !


ಸ್ಪಷ್ಟ ದಿನಚರಿಯಿಲ್ಲದ ಇಂದಿನ ಯುವ ಜನತೆಯ ಜೀವನ ವಿಧಾನ ಇನ್ನೊಂದು ಕಾರಣ. ಕೇವಲ time pass ಮಾಡುವುದಷ್ಟೇ ದಿನಚರಿ ಎಂಬ ಯೋಚನಾ ಮಟ್ಟ ಬೇರಾವುದಕ್ಕೂ ಆಸಕ್ತಿ ವಹಿಸದಂತೆ ಮನಸ್ಸನ್ನು ಹಿಡಿದಿಡುತ್ತದೆ. ಪ್ರತಿಯೊಬ್ಬರೂ ಒಂದು ದಿನ ಕಳೆದು ಹೋದಾಗ "ಅಬ್ಬ ನಿನ್ನೆ ಒಳ್ಳೆಯ time pass ಆಯ್ತು, ಆದ್ರೆ ಇವತ್ತು ಬರೀ ಬೋರು’ ಎನ್ನುತ್ತಾರೆಯೇ ಹೊರತು ಇರುವ ಬದುಕಿನ ಚಿಕ್ಕ ಅವದಿಯಲ್ಲಿ ಒಂದು ದಿನ ವ್ಯರ್ಥವಾಯಿತಲ್ಲ ಎನ್ನುವ ಕಲ್ಪನೆ ಮನಕ್ಕೆ ಬರದಿರುವುದು ಹಾಸ್ಯಾಸ್ಪದ; ಅಷ್ಟೇ ಗಂಭಿರವೂ ಹೌದು. ನಾವು pass ಮಾಡುವ ಪ್ರತಿಯೊಂದು ಕ್ಷಣವೂ ನಮ್ಮನ್ನು ಸಾವಿನ toss ನತ್ತ ಹತ್ತಿರ ಮಾಡುತ್ತೆ. ಒಟ್ಟು ಬದುಕಿನ ಸಮಯದ ಬಗೆಗೆ ಗಮನ ಹರಿಸಿದರೆ ಮನುಷ್ಯನ ಪ್ರಜ್ನಾವಂತ (ದೈಹಿಕ ಹಾಗೂ ಮಾನಸಿಕವಾಗಿ ಸದ್ರಡ ಸ್ಥಿತಿಯಲ್ಲಿರುವ ಬದುಕು) ಬದುಕು ಸರಿಸುಮಾರು 50 ವರ್ಷ ಮಾತ್ರ. ಕೆಲವೊಮ್ಮೇ ಇದಕ್ಕೆ ಅಪವಾದಗಳಿರಬಹುದು. ಬದುಕು ಹತ್ತರಿಂದ ಹದಿನೈದು ವರ್ಷಗಳವರೆಗೆ ಬಾಲ್ಯವನ್ನೇ ಒಳಗೊಂಡಿರುತ್ತೆ. ಬದುಕಿನಲ್ಲಿ ತನ್ನ ಸ್ವಂತಿಕೆಯ ಉದ್ಯೋಗವನ್ನು ಹುಡುಕಿಕೊಳ್ಳುವಾಗ ಇಪ್ಪತ್ತೈದು ಕಳೆದಿರುತ್ತೆ. ಉಳಿದಂತೆ ಮದುವೆ, ಮಕ್ಕಳು ಎನ್ನುತ್ತಾ ಅಳಿದುಳಿರಿವುದು ಕೇವಲ 20 ರಿಂದ 25 ವರ್ಷ ಮಾತ್ರ!. ಆದರೆ, ಬದುಕಿನಲ್ಲಿ ಸ್ವಂತಿಕೆಯ ಬಗೆಗೆ ದ್ರಡ ಯೋಚನೆ ಮಾಡಿ ಪ್ರಯತ್ನಿಸಬೇಕಾದ ಯೌವನದ ಅವದಿಯಲ್ಲಿ ಯಾವುದರ ಬಗೆಗೂ ಅಸಕ್ತಿ ತೋರದೆ ಯಾವಾಗ ನೋಡಿದರೂ ಬೋರು ಎಂದು ಗೊಣಗುವ ವ್ಯಕ್ತಿಗೆ ಇಡೀ ಬದುಕೇ ಬೋರಾಗಿ ನಿರ್ಮಾಣವಾಗಬಲ್ಲುದು!. ಬೋರಿನ ತೇರಿನಿಂದ ಹೊರಬಂದು ಯೋಚಿಸುವ ಹೊತ್ತಿನಲ್ಲಿ ತಲೆಯ ನಡುವೆಲ್ಲೋ ಬಿಳಿಕೂದಲು ಇಣುಕಿ ಅಣುಕಿಸಿರುತ್ತೆ!


ಉತ್ತಮ ವಿಷಯಗಳಲ್ಲಿ ಆಸಕ್ತಿಯ ಕೊರತೆ, ಸಮಯವನ್ನು ಕಳೆಯುವುದೇ ಗಂಭೀರ ಸಂಗತಿ ಎನ್ನಿಸಿಕೊಳ್ಳಲು ಕಾರಣ. ಕ್ಷಣಿಕತೆಯಲ್ಲೇ ಬದುಕನ್ನು ನಿರ್ಮಿಸುವ ಪ್ರಯತ್ನ. ಕಾಣದ ಗಳಿಗೆಯಲ್ಲಿ ಎಲ್ಲೋ ಬಚ್ಚಿಟ್ಟ ಕನಸುಗಳ ಮೇಲ್ಮೈಯನ್ನು ಮುಟ್ಟಿ ಒಳಹೋಗಲಾರದೆ ಬೋರು ಎಂಬ ಆರ್ತನಾದ!. ಕಾಲೇಜಿನ ಬದುಕು ಎಂದಾಗ ಜ್ನಾನ ಪಿಪಸುಗಳಾಗಬೇಕಿರುವ ಬದುಕು. ಪ್ರತಿಯೊಂದು ಕ್ಷಣವೂ ಹೊಸ ಯೊಜನೆಯ ಹುಟ್ಟನ್ನು ಆಹ್ವಾನಿಸಬೇಕು. ಹೊಸ ಕನಸುಗಳನ್ನು ಹೆಣಿಯಬೇಕು. ಅದರ ಹೊರತಾಗಿ ಯೌವನದಲ್ಲಿಯೇ ಮುದಿತನವನ್ನು ಕಂಡಂತೆ ಕೊರಗುವ ಜನರನ್ನು ಕಂಡಾಗ, ಪುಸ್ತಕಕ್ಕೂ ಇವರಿಗೂ ಏನೋ ವೈಷಮ್ಯವಿರಬೇಕು ಅನ್ನಿಸುತ್ತೆ. ಗ್ರಂಥಾಲಯದಲ್ಲಿ ಸಿಗಬಹುದಾದ ಹೆಚ್ಚಿನ ಮೌಲ್ಯದ, ಗುಣಮಟ್ಟದ ಪುಸ್ತಕಗಳನ್ನು, ಕೊನೇ ಪಕ್ಷ ತೆರೆದು ನೋಡುವ ಸೌಜನ್ಯವನ್ನಾದರೂ ಇಂದಿನ ಯುವ ಜನತೆ ರೂಡಿಸಿಕೊಳ್ಳಬೇಕು. ಈ ಹವ್ಯಾಸವನ್ನು ಬೆಳೆಸಿಕೊಂಡ ಬೆರಳೆಣಿಕೆಯಷ್ಟು ಜನತೆಯ ಬದುಕಿನ dictionary ಯಲ್ಲಿ ಬೋರು ಎಂಬ ಶಬ್ದ ಸಿಗದು. ಕೆಲಸವಿಲ್ಲದ ಬದುಕು ರಾಡಿ ತುಂಬಿದ ಚರಂಡಿಯಂತಿದ್ದರೆ, ಕೆಲಸದಲ್ಲಿ ತಲ್ಲೀನವಾಗಿರುವ ಮನಸ್ಸು ಪ್ರಪುಲ್ಲವಾಗಿರಬಲ್ಲುದು.


ಕೊನೆಯದಾಗಿ, ಯುವ ಜನತೆ ತಮ್ಮ ಬದುಕಿಗೆ ಬೇಕಾದ ಅಂಶಗಳನ್ನು ರೂಡಿಸಿಕೊಳ್ಳಲು ಹಿರಿಯ ಹೆಜ್ಜೆಗಳನ್ನು ಸ್ಪರ್ಶಿಸಬೇಕು. ಈ ಕುರಿತಾದ ನಿರ್ಲಕ್ಷ್ಯ ನಮ್ಮ ಬದುಕಿನ model ಗಳನ್ನ ಬದಲಾಯಿಸಬಲ್ಲುದು. ಇದರಿಂದಾಗಿ ಹಿರಿತನದ ಅನುಭವದ ಬಗೆಗಿನ ಕುತೂಹಲ, ತಿಳಿದುಕೊಳ್ಳಬೇಕೆಂಬ ಹಂಬಲ ಬದಿ ಸರಿದು, time pass ಆಗೋದೆ ಇಲ್ಲ ಎನ್ನುವ ಕಲ್ಪನೆ ಮೂಡುತ್ತಿದೆ. ಇಂದಿನ ಯುವ ಮನಸ್ಸಿಗೆ ಸ್ಟಿಫನ್ ಪ್ಲೇಮಿಂಗ್ (cricketer) ಬಗ್ಗೆ ಆಸಕ್ತಿಯಿದೆ, ಆದರೆ ಸ್ಟಿಫನ್ ಹಾಕಿಂಗ್ (world famous scientist, walking with wheel chair) ಯಾರೆಂದು ತಿಳಿಯದು!. ಹೀಗಾಗಿ ನಮ್ಮ ಆಸಕ್ತಿಯ ಆಳವನ್ನು ವಿಸ್ತರಿಸಬೇಕಾಗಿದೆ. ಹಿಂದಿನ ದಿನವಿಡಿ ಕುಳಿತು ಒಂದು ಬಾಲನ್ನು ಬಿಡದೆ ವೀಕ್ಷಿಸಿದ ಕ್ರಿಕೆಟ್ ಪಂದ್ಯದ ಬಗೆಗೆ ಮರುದಿನ ದಿನ ಪತ್ರಿಕೆಯಲ್ಲಿ ಪ್ರತಿ ಅಕ್ಷರ ಹುಡುಕುವ ಕಾಯಕ ಇಂದಿನ ಮಕ್ಕಳದ್ದು !. ಸೋತ ಕಪ್ತಾನನಿಗಿರಬೇಕಾದಷ್ಟು ಗಂಭೀರ ಯೋಚನೆಗಳು ಬೇರೆ !. ಆ ಗಳಿಗೆಯಲ್ಲಿ ತಮ್ಮ optional subject ನ ನೋಟ್ಸ್ ಬಾಕಿ ಇರುವ ವಿಷಯ ಗಮನಕ್ಕೆ ಬರದಿರುವುದು ವಿಪರ್ಯಾಸ. ಇನ್ನದರೂ ಆಳ ಉದ್ದೇಶಗಳತ್ತ ಮುಖ ಮಾಡೋಣ......ಆಗ ಬೋರು ಬಳಿ ಸುಳಿಯದು.


dinu :)

Monday, August 10, 2009

ನಾ ಕಂಡ ನನ್ನದೇ ಬದುಕು.......!








{7 ವರ್ಷಗಳ ಹಿಂದೆ ನನ್ನ ಬದುಕಿನ ಬಗೆಗೆ ನಾನೇ ಗೀಚಿದ ಬರಹ........... ತೊದಲೇ ಜಾಸ್ತಿ........... ಬದುಕು ಮತ್ತಷ್ಟು.....ಬರೆದಷ್ಟು.....ಮುಗಿಯದ್ದು....ಸಮಯ ಸಿಕ್ಕಾಗ ಇನ್ನಷ್ಟು ಬರೆಯುವ ನಿರಿಕ್ಷೆಯಲ್ಲಿ...................................}


ಇನ್ನೂ ಬದುಕ ದಾರಿಯನ್ನು ಪೂರ್ಣ ಸವೆಸಿಲ್ಲ. ಎಲ್ಲೋ ಅನುಭವದ ಮ್ರದು ಸ್ಪರ್ಶವನ್ನು ಕಂಡಿದ್ದೇನೆ. ಪ್ರತಿ ಸ್ಪರ್ಶ ಕಂಡಾಗಲು ನೆನಪನ್ನೇ ಬದುಕ ಸವಿಯಾಗಿ ಸ್ವೀಕರಿಸಿದ್ದೇನೆ. ಪ್ರತಿಬಾರಿ ಬದುಕನ್ನು ನನ್ನ ವಶಕ್ಕೆ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಪ್ರತಿಬಾರಿ ಮುಂದಡಿ ಇಡುವಾಗ ಹಿಂದಿನ ಹೆಜ್ಜೆಯ ಪರಿಪೂರ್ಣತ್ವವನ್ನು ಸಾಧಿಸಲು ಪ್ರಯತ್ನಿಸಿದ್ಧೇನೆ, ಯಶಸ್ವಿಯಾಗಿದ್ದೇನೆ. ಎಷ್ಟೋಬಾರಿ ವಿಫಲಗೊಂಡಿದ್ದೇನೆ. ಆದರೆ ನಿರಾಶೆ ಮೂಡಲಿಲ್ಲ. ಇಷ್ಟೇ ತಾನೇ ಬದುಕು ಆಶಯವೊಂದೇ ಯಶಸ್ಸಿನ ದಾರಿ ಎಂದರಿತು ಮತ್ತೆ ಹಿಂತಿರುಗಿ ಇಟ್ಟಡಿಗೆ ಸ್ಪಷೀಕರಣ ನೀಡುವ ಯತ್ನ ಮಾಡಿದ್ದೇನೆ. ಅಲ್ಲೂ ವಿಫಲಗೊಂಡಾಗ, ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಮುಂದಡಿ ಪುಷ್ಟೀಕರಿಸುವ ಕಾಯಕ ಕೈಗೊಂಡಿದ್ದೇನೆ. ಸರಿ, ಇಷ್ಟೆಲ್ಲಾ ಮಾಡುವ ಮೊದಲು ನನ್ನ ಸವೆಸಿದ ಹಾದಿಯ ಕ್ಷೇತ್ರ ಪರಿಚಯ ಮಾಡದೆ ಬದುಕಿನ ಬಗೆಗಿನ ನನ್ನ ವ್ಯಾಖ್ಯಾನ ಕೇಳುಗರಿಗೆ ಓದುಗರಿಗೆ ತಿಳಿಯುವುದಾದರು ಹೇಗೆ?


ಅದೊಂದು ದಿನ ನನ್ನ ಊಹೆಯಲ್ಲಿರಲಿಲ್ಲ!. ನನ್ನ ತಂದೆತಾಯಿಯರಿಗೆ ಮಾತ್ರ ತಿಳಿದಿರಬಹುದು. ಅನೇಕ ಬಣ್ಣಗಳ ನಡುವೆ ಹೊಸ ಚುಕ್ಕಿಯ ಉದಯಕ್ಕಾಗಿ ಸ್ಮರಿಸುತ್ತಿರುವ ಪ್ರತಿಗಳಿಗೆಯು ನನ್ನ ಹುಟ್ಟಿಗೆ ಕಾರಣರಾದವರಿಗೆ ಮಾತ್ರಗೊತ್ತು!. ೧೯೮೨ರ ಜೂನ್ ತಿಂಗಳ ಶುಭ ಶುಕ್ರವಾರ. ಯಾವ ಕುಂದಿಲ್ಲದೆ, ಯಾವ ಮರೆಯಿಲ್ಲದೆ, ಬೆತ್ತಲೆಯಾಗಿ ಭೂಸ್ಪರ್ಷ, ನನ್ನ ಚರ್ಮ ಮೊದಲ ಬಾರಿ ಕಂಡದ್ದು. ಈಗ ಆ ಚರ್ಮ ಸವೆದು ಹೊಸ ಚರ್ಮ ಮುಊಡಿರಬಹುದು! ಆದರು ಆ ಸ್ಪರ್ಶ ನನ್ನನ್ನು ಚುಚ್ಚುತ್ತಿದೆ. ಕಾಲನ ಕಬಳಿಕೆ ನಿರಂತರವಾಗಿತ್ತು. ಚಿಕ್ಕ ಪುಟ್ಟ ಹೆಜ್ಜೆ ಇಡುವಷ್ಟರವರೆಗೆ ಬೆಳೆದೆ. ಅಷ್ಟೇನೂ ಶ್ರೀಮಂತರೂ ಅಲ್ಲದ, ಬದವರೂ ಅಲ್ಲದ ಮದ್ಯಮ ಕುಟುಂಬ. ತಾಯಿ ಮ್ರದುತಲ್ಪ. ತಂದೆಯ ಗಂಭೀರ ವ್ಯಕ್ತಿತ್ವ. ಅದನ್ನು ಬರಿಸಿಕೊಳ್ಳಲು ಈಗೀಗ ಕನ್ನಡಿ ಮುಂದೆ ನಿಂತು ಪ್ರಯತ್ನಿಸುತ್ತಿದ್ದೇನೆ!! ಎಲ್ಲದರಲ್ಲೂ ಹಿರಿತನದ ಪ್ರಭಾವ. ಶಾಂತ ಪರಿಸರ. ಸ್ವಲ್ಪ ಪ್ರಮಾಣದ ಬಡತನದ ಬೇಗೆ ಆಗಾಗ ಕುಟುಂಬವನ್ನು ಬಾದಿಸುತ್ತಿತ್ತು. ಎಸ್ಟೋ ಬಾರಿ ಅನ್ನ ಹುಡುಕಿದ ನೆನಪು ಕಣ್ಣನ್ನು ಕಟ್ಟುತ್ತಿದೆ. ಯಾಕೆಂದರೆ ಈಗ ಆಗ ಊಟ ಮಾಡಿದ್ದಕ್ಕಿಂತ ಹೆಚ್ಚು ಹಾಳು ಮಾಡುತ್ತಿದ್ದೇವೆ. ಕ್ರಷಿ ಪ್ರಧಾನ ಕುಟುಂಬ. ಇಬ್ಬರು ಅಣ್ಣಂದಿರ ಪ್ರೀತಿ ಅಕ್ಕನ ವಾತ್ಸಲ್ಯ. ಆವಾಗ ತುಂಬಾ ಗುಂಡಗಿದ್ದೆನಂತೆ. ಯಾರಿಗೆ ಗೊತ್ತು? ಭೂತದ ಘಟನೆಗಳೂ ಕೆಲವೊಮ್ಮೆ ಭವಿಷ್ಯವಾಗಿ ಬಿಡುವುದುಂಟು! ಇದು ಆಶ್ಚರ್ಯವಲ್ಲ. ನಿರೀಕ್ಷೆ? ಆ ಗಳಿಗೆ ಇನ್ನು ಬರಬೇಕಾದ್ದು ನನ್ನ ಮಕ್ಕಳ ಚಟುವಟಿಕೆ ನೋಡಿದ ಮೇಲೆಯೇ. ಅಲ್ಲಿಯವರೆಗೆ ಎಲ್ಲವೂ ಮರಳಿನಲ್ಲಿ ಮನೆ ಕಟ್ಟುವ ಪ್ರಯತ್ನ!. ಇದ್ದ ಗದ್ದೆಯನ್ನು ವ್ಯವಸಾಯ ಮಾಡಿ ಬದುಕುತಿದ್ದ ನಮ್ಮ ಬದುಕಿನಲ್ಲಿ ಚಿಕ್ಕಂದಿನಿಂದಲೇ ನನಗೆ ಸಿಕ್ಕ ಕೊಡುಗೆಗಳೆಂದರೆ, ಮರ‍್ಯಾದಸ್ಥ ಗುಣ, ನಿರ್ಬಿಡತೆ (Frankness) ಮತ್ತು ಬಾವನಾತ್ಮಕ ಸಂಬಂದ. ಈಗಲೂ ನಾನು ಬೆತ್ತಲೆಯಾಗಿ ಓಡಾಡಿದ, ಆಟವಾಡಿದ ಓಣಿ ನೆನಪಿದೆ; ಆದರೂ ಈವರೆಗೆ ನನಗೆ ಭೂತದ ಸ್ಥಿತಿಯಾಗಲು ಸಾದ್ಯವಾಗಲೇ ಇಲ್ಲ !!. ಎಷ್ಟೆಂದರೂ ಬಾಲ್ಯ ಮಾತ್ರ ಬಾಲ್ಯ ತಾನೇ?, ಏಗದು ಬರೀ ನೆನಪು. ಜ್ನಾನ ದೇಗುಲದ ಮೆಟ್ಟಿಲು ಸ್ಪರ್ಶಿಸುವ ದಿನ ಕೂಡ ಎದುರಾಯಿತು. ಕುಳ್ಳಗೆ ದಪ್ಪಗಿದ್ದ ನನಗೆ ಕೈಯನ್ನು ಮೇಲೆ ಚಾಚಿ ಕಿವಿಯ ಕೆಳ ಭಾಗದವರೆಗೆ ಬರುತ್ತದೆಯಾ ನೋಡು ಎಂದು ಹೇಳಿದ ನನ್ನ ಪ್ರೈಮರಿ ಮೇಷ್ಟ್ರ ಗಡಸು ಸ್ವರ ಹೆಪ್ಪುಗಟ್ಟಿ ನಿಂತಿದೆ. ಆಗಲೇ ನನ್ನ ಬದುಕಿನ ಪ್ರಥಮ Influence ಹೆಜ್ಜೆ ಅರಂಭವಾದದ್ದು. ಇದು ತಿಳಿದದ್ದು ಮಾತ್ರ ಬುದ್ದಿ ಸರಿಯಾಗಿ ಬಂದ ಮೇಲೆಯೇ !. ೨೫ ರೂ ಜಾಸ್ತಿ ಕೊಟ್ಟು ೧ ವರ್ಷ ಮೊದಲೇ ಶಾಲೆಯತ್ತ ದಾವಿಸಿದ್ದೆ. ಬದುಕಿನ ಉಚ್ಚ್ರಾಯದ ದಿನಗಳು ಬಹುಶ: ಅದೇ ಇರಬಹುದು. ಬೇಲಿರಹಿತ, ತಂತಿರಹಿತ, ಮಾರ್ಗರಹಿತ ಬದುಕದು. ಆದರೂ ಸ್ಪರ್ಶವಿದೆ !, ಅದನ್ನು ನಾನು ಅನುಭವಿಸಿರಲಿಲ್ಲ. ಎಷ್ಟೆಂದರೂ ನಾನು ಚಿಕ್ಕವ ತಾನೆ?

ದಿನದಿಂದ ದಿನಕ್ಕೆ ಎಲ್ಲದರಲ್ಲೂ ಬೆಳೆಯುತ್ತ ಸಾಗಿದೆ. ದೇವರ ದಯೆಯಿಂದ ಚಿಕ್ಕಂದಿನಿಂದಲೇ ಪ್ರೋತ್ಸಾಹ ನನ್ನ ಬೆನ್ನುಜ್ಜಿ ಏಳಿಸುತಿತ್ತು. ಏಗಲೂ ಕೂಡ !. ಭಾಷಣ, ಮಾತುಗಾರಿಕೆ ಚಿಕ್ಕಂದಿನಿಂದ ನನ್ನ ನಾಲಿಗೆಗೆ ಒಲಿದವು. ತಲೆಗೆ ವಿದ್ಯೆಯ ಸವಿಯು ಹಿಡಿಸಲಾರಂಭಿಸಿತು. ನಿರಾಳವಾಗಿ ಯಾವ ಅಡೆತಡೆಯಿಲ್ಲದೆ SSLC ವರೆಗೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದೆ. ನನ್ನ ಬದುಕಿನ ವಿದ್ಯೆಯ ಬೆಳವಣಿಗೆಯ ಗೆರೆ ಮೊದಲು ಹಿಂದೆ ಚಲಿಸಿದ್ದು ಪ್ರಥಮ PUC ಗೆ ಕಾಲಿಟ್ಟಾಗ !, ಆದರೂ ಅದನ್ನು ಪುನ: ಬದುಕಿನಲ್ಲಿ ಪಡೆದಿದ್ದೇನೆ ಎಂಬುದಂತೂ ಶತಾಂಶ ಸತ್ಯ. ನನ್ನಕ್ಕನಿಗೆ ಒಂದು ಕೊಡೆ, ಆದರೆ ಮರದ ಜಲ್ಲಿನ ಒಂದು ದೊಡ್ಡ ಕೊಡೆಯಡಿಯಲ್ಲಿ ಕೈ-ಮೈ ಹಿಡಿದುಕೊಂಡು ಮೂರು ಜನ (ತ್ರಿಮೂರ್ತಿಗಳು) ದಿನಾಲೂ ಶಾಲೆಗೆ ಹೋಗುತ್ತಿದ್ದುದು ಇನ್ನೂ ನೆನಪಿದೆ. ಆಗಲೇ ನನಗೆ ಸುಧಾರಿಸಿಕೊಳ್ಳುವ ಮನ:ಸ್ಥೈರ್ಯ ಬಳುವಳಿಯಾಗಿ ಬಂದಿತ್ತು. ನನ್ನ ಅಣ್ಣಂದಿರು ಕೂಡ ನನ್ನ ಬದುಕಿನ ಬಲು ದೊಡ್ಡ Model ಗಳು ಎಂದರೆ ತಪ್ಪಿಲ್ಲ. ಅವರಿಬ್ಬರು ಸಹ ಕಲಿಯುವಿಕೆಯಲ್ಲಿ ಎಲ್ಲರಿಗಿಂತ ಮುಂದೆ. ಬದುಕಿನ ಬಹು ದೊಡ್ಡ ಕಹಿ ಅನುಭವ ದೊರೆತದ್ದು 80 ಸರಾಸರಿ ಅಂಕ ಪಡೆದ ನನ್ನ ದೊಡ್ಡಣ್ಣ ಹೋಟೆಲ್ ಕೆಲಸಕ್ಕಾಗಿ ಹೊರ ಊರಿಗೆ ತೆರಳಿದ್ದು !, ಛೇ; ವರ್ತಮಾನ ಭೂತಕ್ಕಿಂತ ಎಷ್ಟು ಭಿನ್ನ ಎನಿಸುತ್ತಿದೆ. ಆಗಲೇ ಬದುಕಿನ ತೀವ್ರತೆ ಅರ್ಥವಾಗತೊಡಗಿದ್ದು. ಬದುಕಿನಲ್ಲಿ ಹೀಗೂ ಉಂಟಾ? ಎಂಬ ಪ್ರಶ್ನೆ ಮೂಡಿದ್ದು. ಚಿಕ್ಕಂದಿನಿಂದಲೇ ಎಲ್ಲಿ ಹೋದರೂ ಬಹುಮಾನ, ಸ್ಪರ್ದಾಪುರುಷೋತ್ತಮ award ಗಳು. ನನ್ನ ಅನಂದ ಆವಾಗ ಎಲ್ಲೆ ಮೀರಿತ್ತು. ಆದರೆ ಅದರ ಗಂಭಿರತ್ವ ನನಗೆ ಅರ್ಥವಾಗಿರಲಿಲ್ಲ. ನನಗೀಗಲೂ ಅ ಕೊರಗು ಹೋಗಿಲ್ಲ !. ಸಂಗೀತ ಕಲಿಯಬೇಕೆಂಬುದು ನನ್ನ ಬಹುದೊಡ್ಡ ಕನಸಾಗಿತ್ತು, ಆದರೆ ವಿಧಿ ಲೀಲೆಯೇ ಬೇರೆ ಆಗಿತ್ತು. ಗಡಸು ಸ್ವರ, ಹಾಗಾಗಿ ಕನಸು ಕನಸಾಗೆ ಉಳಿದಿತ್ತು. ನನ್ನ ಬದುಕಿನ ಬಹುದೊಡ್ಡ ಅಂಶವೆಂದರೆ ನನ್ನ ಧನಾತ್ಮಕ ಮತ್ತು ರಣಾತ್ಮಕ ಅಂಶಗಳ ಬಗೆಗೆ ದಿನಾಲೂ ಪ್ರಶ್ನಿಸಿಕೊಳ್ಳುವಂತದ್ದು. ಎಂಟನೇ ತರಗತಿಯಿಂದಲೇ ಆ ನಿರ್ಧಾರಕ್ಕೆ ಬಂದಿದ್ದೆ. ಮೊದಲಿನಿಂದಲೂ ಭಾವನಾತ್ಮಕ ಜೀವಿ. ಬದುಕಿನ ಪ್ರತಿಸ್ತರದಲ್ಲೂ ಜೀವಿತ ಅಂಶ ಕಾಣಬಯಸುವವನು. ದನ ಕರುವನ್ನು ನೆಕ್ಕಿದಾಗ ಸಿಗುವ ಅವ್ಯಕ್ತ ಸಂತೋಷದಂತೆ , ಮೌನದಲ್ಲಿ ಮೊದಮೊದಲು ಸಂತೋಷ ಸಿಗುತಿತ್ತು. ಆದರೆ ಅದು ಮುರಿದದ್ದು ಹೈಸ್ಕೂಲಿನಲ್ಲಿ ನಡೆದ ಒಂದು ಘಟನೆಯಿಂದ. ಅದು ನನ್ನ ಬದುಕಿನ ದೊಡ್ಡ ಕಪ್ಪು ಚುಕ್ಕೆ !. ಹೇಗೋ ಅದರಿಂದ ಹೊರಬರುವ ಯತ್ನ ಮಾಡಿ ಯಶಸ್ವಿಯಾದೆ. ಅದರ ಫಲವೇ ನಾನು ಕುಂದಾಪುರ ಬಿಟ್ಟು PUC ವ್ಯಾಸಂಗಕ್ಕಾಗಿ ಉಜಿರೆ SDM ಕಾಲೇಜಿಗೆ ತೆರಳಿದ್ದು. SSLC ಮುಗಿದ ನಂತರ ಪ್ರತಿ ದಿನವೂ ಸಯಂಕಾಲ ಮಲಗುವ ಮೊದಲು ಕೋಣಿಯ ಚಿಲಕ ಹಾಕಿ 10 ನಿಮಿಷ ದಿನದ ಬಾವುಕಗಳಿಗೆ ನೆನೆದು ಅಳುತ್ತೇನೆ, ಈಗಲೂ ಕೂಡ !. ಅದೀಗ ನನ್ನ ದಿನಚರಿಯಾಗಿ ಬಿಟ್ಟಿದೆ !. ನನ್ನ ಬದುಕಿನಲ್ಲಿ ನಾ ಕಂಡ ಸತ್ಯವೆಂದರೆ, ಬದುಕಿನಲ್ಲಿ ಯಾವುದನ್ನು ಬೇಕು, ಆಗಬೇಕು ಎಂದೆಣಿಸಿದ್ದೆನೋ ಅದರಲ್ಲಿ ಒಂದೂ ಆಗಲಿಲ್ಲ. ಹಾಗಾಗಿ ಈಗೀಗ ಅ ಬಗ್ಗೆ ಯೋಚಿಸುವ ಗೋಜಿಗೆ ಹೋಗುವುದನ್ನು ಬಿಟ್ಟಿದ್ದೇನೆ. ಈಗ ನನ್ನ ನಿರ್ಧಾರ ಸ್ಪಷ್ಟ. ಕಾಲನನ್ನು ನಮ್ಮ ದಿನಚರಿಗೆ ನಿಯಂತ್ರಿಸುವ ಯತ್ನ ಬಿಟ್ಟು, ನಮ್ಮ ನಿರ್ಧಾರಗಳಿಗೆ ಒಲಿಸಿಕೊಳ್ಳುವ ಕಾರ್ಯ ಬಿಟ್ಟು, ಕಾಲದೊಂದಿಗೆ ಸವೆಸುವ ದಾರಿ ಕಂಡುಕೊಳ್ಳುವತ್ತ ಸಾಗಿದ್ದೇನೆ. ಆದರೆ ಯಶಸ್ವಿಯಾಗಿದ್ದೇನೆ ಎನ್ನಲಾರೆ. ಎಷ್ಟೆಂದರೂ ಬಾಲ್ಯದ ಗುಣವನ್ನು ಪೂರ್ಣ ತೊರೆಯಲಾದೀತೆ?.

ಛೇ, ನಾನು ಬದುಕಿನಲ್ಲಿ ಬಂದೊದಗಿದ ಎಷ್ಟೆಷ್ಟೋ ವಿಪುಲ ಅವಕಾಶಗಳನ್ನು ಕೈಚೆಲ್ಲಿ ಕುಳಿತಿದ್ದೆ. ಅದರಲ್ಲೂ ನಾ ಕೈಗೊಂಡ ನಿರ್ಧಾರಗಳಲ್ಲಿ ಆಶ್ಚರ್ಯವಾಗಬಹುದಾದ ನಿರ್ಧಾರವೆಂದರೆ, ದ್ವಿತೀಯ PUC ಆದ ನಂತರ ವ್ರತ್ತಿಪರ ಶಿಕ್ಷಣವನ್ನು ತಿರಸ್ಕರಿಸಿದ್ದು !. ಅಂಕಗಳಿಗೇನು ಕೊರತೆಯಿರಲಿಲ್ಲ. CET rank ಕೂಡ ಉಜ್ವಲ ದಾರಿ ಒದಗಿಸಿತ್ತು. ಯಾರೂ ನಂಬಲಾರದ ಸತ್ಯವೆಂದರೆ ಯಾವ ಕೋಚಿಂಗಿಗೂ ಹೋಗದೆ CET ಯಲ್ಲಿ 621 ನೇ rank ಬಂದಿತ್ತು. ನಂಬಲಸದಳ ಕೂಡ !. ಆದರೆ ದಿಟ್ಟ ಕ್ರಮ ಕೈಗೊಂಡು ಈಗಲೂ ನನ್ನ ಸಂಬಂಧಿಕರ ಛೀ, ತೂ ಎಂಬ ಮಾತುಗಳಿಗೆ ಬದುಕಿನಲ್ಲಿ ವೇದಿಕೆ ನಿರ್ಮಿಸಿಕೊಂಡೆ.


ಇದು ಚಿಕ್ಕ ಬದುಕಿನ ಚೊಕ್ಕ ಚಿತ್ರಣ. ಆದರೂ ಎಷ್ಟೋ ಬಾರಿ ಹಳೆಯ ನೆನಪುಗಳನ್ನು ಚುಚ್ಚಿ ಚುಚ್ಚಿ ನೋಡಿದ್ದೇನೆ. ರುಚಿ ಕಂಡುಕೊಳ್ಳಲಾಗದೆ ಅತ್ತಿದ್ದೇನೆ. ಬದುಕ ಚಿತ್ರಪಟ ಕೈಯಲ್ಲಿ ಹಿಡಿದು ಎಷ್ಟೋ ಬಾರಿ ಮೌನಿಯಾಗಿದ್ದೇನೆ. ಹುಚ್ಚನಂತೆ ವರ್ತಿಸಿದ್ದೇನೆ. ಆದರೆ ನನ್ನ್ಯಾವ ಬಾವನೆಗಳೂ ಅದಕ್ಕೆ ಬೆನ್ನು ತಟ್ಟಲಿಲ್ಲ. ರಾತ್ರಿ ಅದಕ್ಕಾಗಿ ಅತ್ತಿದ್ದೇನೆ. ಬದುಕಿನ ಎಷ್ಟೋ ಆದರ್ಶಗಳು ಅರ್ಥಕಂಡುಕೊಳ್ಳಲಾರವು ಎಂಬ ಕೊರಗು ಇನ್ನೂ ಇದೆ. ಈ ದಿಶೆಯ ಯೋಚನೆ ಹರಿದಾಗ ಸಾಹಿತ್ಯ ನನಗೆ ಸಾಂತ್ವನ ನೀಡಿತು. ಅದರತ್ತ ವಾಲಿದೆ. ಸ್ವಲ್ಪ ಪ್ರಮಾಣದಲ್ಲಿ ಪೆನ್ನಿನ ಮೊನೆಗೆ ಕಸರತ್ತು ಕೊಡುವ ಯತ್ನ ಮಾಡಿದೆ. ಅದರ ಫಲವೇ ರಾಜ್ಯ ಮಟ್ಟದ ಕವನಗಳ ಸಂಗ್ರಹ ‘ಅನ್ವೇಷಣಿ‘ ಪುಸ್ತಕದಲ್ಲಿ ನನ್ನ ಕವನವೂ ಒಂದಾಗಿ ಪ್ರಕಟಗೊಂಡಿತು. ಜನವಾಹಿನಿಯ ‘ದ್ರಷ್ಟಿಕೋನ‘ದಲ್ಲಿ ಹಲವಾರು ಲೇಖನಗಳು ಪ್ರಕಟಗೊಂಡವು. ಬಹುಮಾನಗಳು ಕೈ ಸ್ಪರ್ಶಿಸಿದವು. ತರಂಗ, ಉದಯವಾಣಿ ಮುಂತಾದ ಪತ್ರಿಕೆಗಳು ಮನದ ಸ್ಪಂದನಗಳಿಗೆ ವೇದಿಕೆಯಾದವು. ಎಲ್ಲಕ್ಕಿಂತ ಮುಖ್ಯವಾಗಿ ಈ ಬರಹಗಳು ಬದುಕನ್ನು ಪ್ರೀತಿಸುವ ದಾರಿ ತೋರಿದವು. ಎಷ್ಟೋ ಮಧುರ ಬಾಂದವ್ಯಗಳನ್ನು ಕೂಡಿ ಹೊಸೆದವು. ರಾಜ್ಯ ಮಟ್ಟದಲ್ಲೂ ಕತೆ ಆಯ್ಕೆಯಾಗುವವರೆಗೆ ಪ್ರಯತ್ನ ಯಶಸ್ವಿಯಾಯಿತು. ಹೆಜ್ಜೆ ಇನ್ನೂ ಮುಂದೆ ಸಾಗುವುದರಲ್ಲಿದೆ............................................

ಹ್ಲೂ, ಬಯಸಿದ್ದು ವಿಜ್ನಾನ, ಅನುಭವಿಸುತ್ತಿರುವುದು ಸಾಹಿತ್ಯ, ದಿನಚರಿ ಹರಟೆ, ಸಂಬಂಧ ಭಾವನಾತ್ಮಕ....ಹೀಗೆ ಹಲವು ಮುಖಗಳ ಬದುಕು ನನಗೆ ಖುಷಿ ಕೊಡಲಾರಂಭಿಸಿತು. ಆದರೆ ಒಂದೇ ಮುಖವನ್ನು ನೋಡಿದ ಕೆಲವರಿಗೆ ನನ್ನನ್ನು ಕಂಡಾಗ ಮೈಮೇಲೆ ಕೆಂಡ ಸುರಿವಂತಾಗುವುದುಂಟು. ದೇವರು ಅವರನ್ನು ತುಪ್ಪದಲ್ಲೇ ಇಟ್ಟಿರಲಿ !. ಹೀಗೆ ಬದುಕಿನ ಬಗೆಗೆ ನಿಡಿದಾದ ನಿಟ್ಟುಸಿರನ್ನು ಕೈಯಲ್ಲಿ ಹಿಡಿದು ಮುಂದೆ ಸಾಗುತ್ತಿದ್ದೇನೆ. ಆ ದಾರಿಯಲ್ಲಿ, ‘ಹುಡುಕುತ್ತಿದ್ದೇನೆ, ಭೂತದ ನೆನಪುಗಳನ್ನು; ಅರಸುತ್ತಿದ್ದೇನೆ ಭವಿಷ್ಯದ ಕನಸುಗಳನ್ನು; ನಿರೀಕ್ಷಿಸುತ್ತಿದ್ದೇನೆ ವರ್ತಮಾನದ ವಾಸ್ತವವನ್ನು; ಸ್ವೀಕರಿಸುತ್ತಿದ್ದೇನೆ ಕೈಯೆದುರೇ ನುಸುಳಿಕೊಳ್ಳುವ ಗಳಿಗೆಯನ್ನು‘..........................ಆದರೂ ಎಷ್ಟೋ ಬಾರಿ ಭೂತ ಕಳೆದದ್ದು, ಭವಿಷ್ಯ ಕಲ್ಪಿಸಲಾಗದ್ದು....ಇಷ್ಟಿದ್ದೂ ವರ್ತಮಾನ ಕೈಯಿಂದ ನುಸುಳಿಕೊಳ್ಳುವುದೇಕೆ? ಎಂಬ ಪ್ರಶ್ನೆಯನ್ನು ಮುಂದೊಡ್ಡಿ ಮುಂದೆ ಸಾಗುತ್ತಿರುವ........

ನಿಮ್ಮ ದಿನು

ನೊಂದ ಮನಸಿಗೆ .................



ನೀನು.........
ತಿಳಿನೀರ ಬುಗ್ಗೆ, ನೋವಿನಾಕಾಶದಲಿ
ಬಲಿತ ಕನಸು, ಬದುಕ ಗಂಭೀರತೆಯಲಿ
ನೋವಿನಾಟದಲಿ, ಕಪ್ಪುಗೋಡೆ
ನಂಬಿಕೆಯ ಪರಿಯಲ್ಲಿ ಪುಟ್ಟಮಗು
ಪ್ರೀತಿಯಾಳದಲಿ ಶರಧಿ
ಗೌರವದ ಆಭರಣ ನಿನ್ನ ಮೈತುಂಬ



ನಾನು.............
ತೇಲಿಹೋಗುವ ಮೋಡ
ಮೊಳಕೆಯೊಡೆವ ಬೀಜ
ಅನಂತ ಶಾಖದ ಸೂರ್ಯ
ಬಣ್ಣದೊಳಗಿನ ಆಕಾಶ
ಬಯಲಾಗದ ಪರಿಯ ರಕ್ಷಕ


ಆದರೂ.....
ಮರೆತಿಲ್ಲ ಗೆಳತಿ ಬದುಕಿನರ್ಥ
ಮರೆತಿಲ್ಲ ಗೆಳತಿ ನೋವಿನಾಳ
ಮರೆತಂತೆ ಮರೆವ
ಅರಿತಂತೆ ಬೆರೆವ
ಈ ಮನಸು.....
ಕರಗುವ ಮಂಜು...
ನಿನ್ನದೆನ್ನುವ ಬದುಕ ಪುಟದಲಿ
ನನ್ನದೇ ಮುನ್ನುಡಿ
ಬರಹ ಕೂಡ ನನ್ನದೇ
ಹೆಸರು ಮಾತ್ರ ನಿನ್ನದು......

ನಿನ್ನ, ದಿನು

Wednesday, August 5, 2009

Beutiful experience of life........ snowfall during winter season in South Korea...Njoying from 3 years!!!......white rain from sky......around -20 degree temperature...totally chilled, still warm experience of heart......all I can say.......nature is utter ultimate..........everything is rest...!

Tuesday, July 28, 2009







Quite interesting! Keep Walking.....
Jus to check this out...... The Organs of your body have their sensory touches at the bottom of your foot, if you massage these points you will find relief from aches and pains as you can see the heart is on the left foot.



Typically they are shown as points and arrows to show which organ it connects to.
It is indeed correct since the nerves connected to these organs terminate here.
This is covered in great details in Acupressure studies or textbooks.
God created our body so well that he thought of even this. He made us walk so that we will always be pressing these pressure points and thus keeping these organs activated at all times.
So, keep walking...

ನಿರೀಕ್ಷೆಗಳಂದ್ರೆ ಇಷ್ಟೇನಾ??






ಎಂದಿನಂತೆ ಇವತ್ತು ಅದೇ ಬೆಳಗು.......ಸ್ವಲ್ಪ ತಡವಾಗಿ ಎದ್ದೆನೇನೋ ಎಂಬ ಆತಂಕ, ಬೇಸರ :(...ಬಹುಶ: ಬೇಗ ಎದ್ದಿದ್ದರೆ ಛೇ ಇನ್ನು ಸ್ವಲ್ಪ ಮಲಗಬಹುದಿತ್ತು ಅನ್ನಿಸುತ್ತಿತ್ತೇನೋ ನಿನ್ನೇ ಮನಸಿಗೆ ಬಂದಂತೆ !....E ಬದುಕು , ಅದರ ಬಗೆಗಿನ ಯೋಚನೆಗಳು ಕೆಲವೊಮ್ಮೇ ವಿಚಿತ್ರ ಅನ್ನಿಸುವಷ್ಟು ವ್ಯಾಪಕ ರೂಪ ಕಂಡುಕೊಳ್ಳುತ್ತೆ....ಎಷ್ಟೋ ಬಾರಿ ಅರ್ಥವಾಗದಷ್ಟು! ಮನೆಯಿಂದ ಎಷ್ಟೋ ಸಾವಿರ ಮೈಲಿ ದೂರದಲ್ಲಿ ಕುಳಿತಾಗ ಮತ್ತೆ ಮತ್ತೆ ಕಾಡುವ ಮನೆ ಕಡೆಯ ನೆನಪು. ಕಣ್ಣು ಬಿಟ್ಟಿದ್ದು ಕಣ್ಮುಚ್ಚಿ ಓಡಾಡಿದ ಗದ್ದೆಯ ಬೈಲಿನ ಅಂಚುಗಳು, ಊರೇ ಅರಿಯದಿದ್ದರೂ ದೇಶದ ಬಗೆಗೆ ತಿಳಿದುಕೊಳ್ಳುವ ತವಕದಲ್ಲಿ ಪೇಟೆಗೆ ಓಡಿಬಂದು ಓದುತ್ತಿದ್ದ ದಿನ ಪತ್ರಿಕೆ......ಇವತ್ತು ಮಾಯಾಪೆಟ್ಟಿಗೆ ಮುಂದೆ ಕುಳಿತಾಗ ಗಣಿಕೆಗೆ ಸಿಗದಷ್ಟು ವಿಷಯಾದರಿತ ಕೊಂಡಿಗಳಿದ್ದರೂ ಒಮ್ಮೊಮ್ಮೆ ಯಾವುದೂ ಬೇಡ ಎನ್ನುವ ನಿರ್ಲಿಪ್ತತೆ !. ಈ ಹುಚ್ಚು ಬದುಕಿನ ನಿರೀಕ್ಷೆಗಳಂದ್ರೆ ಇಷ್ಟೇನಾ? ...

ಇದ್ದಾಗ ಅನುಬವಿಸುವ ಪ್ರಜ್ನೆ ಮೂಡದೆ, ಇಲ್ಲದಿದ್ದಾಗ ಛೇ ಅನುಬವಿಸಬೇಕಿತ್ತು ಅಂದುಕೊಳ್ಳುವ, ಮತ್ತೇ ಮತ್ತೇ ಬೇಸರಿಸುವ ಮನಸ್ಸು.....ಹೆಂಚು ಮನೆಯ ಶಾಖದಡಿಯಲ್ಲಿ, ಅಷ್ಟೇನು ಬೆಳಕಿಲ್ಲದ ಅರೆ ಕತ್ತಲ ಕೋಣಿಯಲ್ಲಿ, ಆಕಾಶವೇ ಮನೆಯೆಂಬಂತಿದ್ದ ಬಯಲು ಗದ್ದೆಯಲ್ಲಿ, ಪರ್ವತದ ತುದಿಯಲ್ಲಿದ್ದಂತೆ ಭಾಸವಾಗುತ್ತಿದ್ದ ಉಪ್ಪರಿಗೆಯ ಕಿಟಕಿಯಲ್ಲಿ, ನೆರಳು ನೀಡಲು ಕಂಜೂಸು ಮಾಡುತ್ತಿದ್ದ ಹುಣಸೆ ಮರದಡಿಯಲ್ಲಿ, ಶಾಲೆಗೆ ಹೋಗುವಾಗ ಸಿಗುತ್ತಿದ್ದ ಸಣ್ಣ ನಾಲೆಯ ಸಂಕದಲ್ಲಿ, ಕಲ್ಲಿಟ್ಟು ನೋಯಿಸುತ್ತಿದ್ದ ಮಾವಿನ ಮರದ ಕೊಂಬೆಯಲ್ಲಿ, 50 ಪೈಸೆ ಕಡಲೆ ತಿನ್ನುತ್ತಿದ್ದ ಅಂಗಡಿಯ ಜಗುಲಿಯಲ್ಲಿ, ಬಸ್ ಹತ್ತಲು ಕಾಯುತ್ತಿದ್ದ ಬಸ್ ನಿಲ್ದಾಣದ ಕಟ್ಟೆಯಲ್ಲಿ, ಮನಸು ಬಂದಾಗ ಜೋಲು ಹಾಕುತಿದ್ದ ಬೊರ್ವೆಲ್ ಬಾಲದಲ್ಲಿ (handle)....... ಮನಸ ಅಂಚನ್ನು ಹಾದು ಹೋಗುತ್ತಿದ್ದ, ಒಮ್ಮೊಮ್ಮೇ ಮನಸಲ್ಲೇ ಉಳಿದು ಕಾಡುತ್ತಿದ್ದ ಅದೆಷ್ಟೋ ಕನಸುಗಳು ಇಂದಿನ ನಿರೀಕ್ಷೆಗಳಾ ? ಅನ್ನುವಷ್ಟು ಪ್ರಶ್ನೆ ಮೂಡಿಸುತ್ತೆ...ಅಷ್ಟಕ್ಕೂ ಕನಸು ಕಾಣುತ್ತಿದ್ದ ಅದೇ ಮನಸ್ಸು ಇಂದು, ಕಣ್ಣು ಕುಕ್ಕುವ ಪ್ರಪಂಚದ ಒಂದು ಪ್ರಖ್ಯಾತ ನಗರದ ಉನ್ನತ ಮಟ್ಟದ ಆಸ್ಪತ್ರೆಯ ಪ್ರಯೋಗಾಲಯದಲ್ಲಿದ್ದಾಗ, air cooler ಅಡಿಯಲ್ಲಿ ತಂಪಾಗಿ ಮಲಗುವ ಸಂತ್ರಪ್ತ ಮನೆಯಲ್ಲಿ, ಬಣ್ಣಬಣ್ಣದ ಹುಡುಗಿಯರ ಮದ್ಯೆ ಕ್ರತಕ ಕಾರಂಜಿಗಳ ಮುಸುಕಲ್ಲಿ, ಗುರಿ ಮುಟ್ಟುವ ತವಕದಲ್ಲಿ ಒಂದೇ ಸವನೆ ಓಡಾಡುವ ಮೆಟ್ರೋ ರೈಲುಗಳ ನಿಲ್ದಾಣದ ಬೆಂಚಿನಲ್ಲಿ, ಬೇಡವೆನಿಸಿದರೂ ಕೇಳಲೇ ಬೇಕೆಂಬಂತೆ ಕಿವಿಗೆ ತಟ್ಟುವ ಪಾಶ್ಚಾತ್ಯ ಸಂಗೀತದ ನಡುವೆ, ಇತಿಹಾಸದ ಪುನರಾವರ್ತನೆ ಆದಂತೆ ಭಾಸವಾಗುವ ಮಿನಿ ಉಡುಗೆ ಸಂಸ್ಕ್ತತಿಯ ಬಿಕಿನಿ ಸನ್ನಿವೇಶದ high heel ಪರಿಸರದಲ್ಲಿ, ಏನು ಬೇಡವೆಂಬಂತೆ ಕಾಡುವ ಸ್ತಿತಿ ಕಂಡಾಗ, ಅನುಬವಿಸುವಾಗ ಮತ್ತದುವೆ ಪಶ್ನೆ.......ನಿರೀಕ್ಷೆಗಳಂದ್ರೆ ಇಷ್ಟೇನಾ?

ಬಹುಷ: ಕನಸುಗಳು ತಮ್ಮ ವ್ಯಾಪ್ತಿಯನ್ನ ಕಂಡುಕೊಳ್ಳುವಂತದ್ದು ಅನಿವಾರ್ಯತೆಯ ಅಂಚಿನಲ್ಲಿ, ದೌರ್ಬಲ್ಯದ ಮೆಟ್ಟಿಲಲ್ಲಿ !...ಅದಕ್ಕೇ ಇರಬೇಕು...ಇದ್ದಾಗ ಬೇಕೆನಿಸದೆ ಇಲ್ಲದಿದ್ದಾಗ ಮತ್ತೆ ಮತ್ತೆ ಬೇಕು ಅನ್ನಿಸುವಂತದ್ದು.... ಮನೆ ಮದುವೆಯಲ್ಲಿ ಹಸಿವೆ ಇಲ್ಲದಿರುವಂತೆ !. ಹಾಗಾಗಿ ಇಷ್ಟೆಲ್ಲಾ ಜಿಜ್ನಾಸೆಗಳ ನಡುವಲ್ಲಿ ಒಂದಂತು ಸ್ಪಷ್ಟ..... ನಿರೀಕ್ಷೆಗಳು...ನಿನ್ನೆ ಮತ್ತು ನಾಳೆ.... ಇತಿಹಾಸ ಹಾಗು ಭವಿಷ್ಯ..... ನೆನಪು ಮತ್ತು ಕನಸು.......ಹೀಗಾಗಿ ಇಂದಿನೊಳು ನಿರೀಕ್ಷೆಗಳನ್ನ ಬೆರೆಸಿ ಗೊಂದಲ ನಿರ್ಮಾಣ ಮಾಡಿಕೊಳ್ಳುವುದಕ್ಕಿಂತ ನಿರೀಕ್ಷೆಗಳಂದ್ರೆ ಇಷ್ಟೇನಾ ಅಂದುಕೊಳ್ಳುವಂತದ್ದು ಒಳಿತು ಅನ್ಸುತ್ತೆ ಅಲ್ವಾ??


Saturday, March 14, 2009

Inside the Korea.






About Korea (South)


The korean penisula extends southward from the eastern end of asian continent. Mountains covered 70% of this country land. Rice is bulk of korea's agricultral crops. The penisula is divided into The democratic Republic of Korea in the south and communist ruled North Korea.. The republic of Korea consists of nine provinces (do). In total there are 77 cities (si) and 88 counties (gun), including the capital Seoul. Major religions are Shamanism, Buddhism and Confucianism along with Christianity !.




National Flag:


The korean flag is called taegeukgi. Design symbolises the principles of yin and yang. Red half in the circle represents the protective cosmic forces of yang and blue half reperesents the responsive cosmic forces of yin. Surrounded each trigram symbolises the heaven, earth, fire and water (from top left- clockwise direction)




Mugunghwa (Rose of Sharon)- Korean National Flower !



It blossoms every year from July to October. Mugung means immortality.


Hanguel-Korean Language !