ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Wednesday, September 23, 2009

ಸ್ನಾನಕ್ಕಿಂತ ಮೊದಲು ಸುಂದರವಾಗಿ ಕಾಣೋ ಹಾಗೆ!!


ಬದುಕಿನ ಕೆಲವೊಂದು ಸತ್ಯಗಳೇ ಹೀಗೆ......!

ಎಷ್ಟು ಬಾರಿ ಕೇಳಿದ್ದೇವೆ...ಸತ್ಯವನ್ನು ನುಡಿಯಬೇಕು, ನೇರ ನಡೆ-ನುಡಿಯುಳ್ಳ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು, ನಂಬಿಗಸ್ಥ ವ್ಯವಹಾರವಿರಬೇಕು...there should be a models like Gandhi......ಆದರೆ....?. ಯಾವತ್ತಾದ್ರೂ 100% ಸತ್ಯವನ್ನು follow ಮಾಡಬಲ್ಲ, ಮನಸಿಗೆ ತಪ್ಪು ಕಾಣಿಸಿದ್ದನ್ನ ನೇರವಾಗಿ ಹೇಳಬಲ್ಲ ವ್ಯಕ್ತಿತ್ವ ಬೆಳೆಸಿಕೊಂಡವರು ಆಪ್ತರಾಗಿ ಈ ಸಮಾಜದಲ್ಲಿ ಏಳಿಗೆ ಹೊಂದೋಕೆ ಸಾದ್ಯಾನಾ?....ಕೊನೇ ಪಕ್ಷ ಬದುಕಿನ ಪಥದಲ್ಲಿ upto date valued ಮನುಷ್ಯ ಅನ್ಯರಿಗಿಂತ ಬೇಗನೆ ಆಪ್ತರಾಗೋಕೆ ಸಾದ್ಯಾನಾ?....ನಿಜವಾಗಿ ಯೋಚಿಸಿದ್ರೆ ಇದು ಒಂತರಾ ಸ್ನಾನಕ್ಕಿಂತ ಮೊದಲು ಸುಂದರವಾಗಿ ಕಾಣೊ ಹಾಗೆ!, ತುರಿಕೆಯುಳ್ಳ ಗಾಯವನ್ನು ಪದೇ ಪದೇ ತುರಿಸುವಾಗ ಸಿಗುವ ಸುಖದ ಹಾಗೆ. ಒಪ್ಪಿಕೊಳ್ಳೋಕೆ ಕಷ್ಟ...ಆದರೂ ವಿಷಯ ಮಾತ್ರ ಸ್ಪಷ್ಟ. ಹಾಗಾಗಿ ಮನುಷ್ಯ ಪೂರ್ಣ ಪ್ರಮಾಣದಲ್ಲಿ detergent clean ಆಗಿ ಇದ್ದಾಗ, ಅನ್ಯರಿಗೆ ಒಳ್ಳೆಯವನಾಗಿ ಕಾಣಿಸುವುದಕ್ಕಿಂತ, ಬದುಕಿನ ಕನ್ನಡಿ ಮುಂದೆ ನಿಂತಾಗ ಅಲ್ಪ ಸ್ವಲ್ಪ ಆಚೀಚೆ ಮಾಡಬಲ್ಲ so called SMART ಮನುಷ್ಯ ಮಾತ್ರ ಈ ಸಮಾಜದಲ್ಲಿ accept ಆಗಬಲ್ಲ. ಕಡೇ ಪಕ್ಷ 100% ಸತ್ಯ, ನಂಬಿಕೆ maintain ಮಾಡೋವರಿಗಿಂತ ಉತ್ತಮ!

ಎಷ್ಟೋ ಬಾರಿ ಅಂದುಕೊಳ್ಳುತ್ತೇನೆ....ಅನ್ನಿಸಿದ್ದನ್ನ ನೇರವಾಗಿ ಹೇಳಲೇಬಾರದು, ಕಲೆ ಕಾಣಿಸಿದರೂ ಬೆಲೆ ಇದೆ ಎನ್ನುವಂತೆ ವರ್ತಿಸಬೇಕು, ಸುಂದರವಾಗಿ ಕಾಣಿಸದಿದ್ದರೂ ಗೆಳತಿ, ’How I look today?' ಎಂದಾಗ ’you look like angel' ಅನ್ನಬೇಕು, ಕೈಯಲ್ಲಿ ಅಧಿಕಾರ ಇದ್ದವರು ತಪ್ಪು ಮಾಡಿದರೂ ನೋಡದಂತೆ ಸುಮ್ಮನಿರಬೇಕು, ......ಹೀಗೆ ಹಲವು. ಆದರೂ ಸಾದ್ಯವಾಗುತ್ತಿಲ್ಲ!. ಸುಂದರವಾಗಿ ಕಾಣದ ವಸ್ತುವಿಗೆ looks great ಅನ್ನೋ ಅಭ್ಯಾಸ ಬಂದೇ ಇಲ್ಲ....ಇದರಿಂದಾಗೇ ನನಗೆ ಪೋಟೊ ಕಳಿಸುವವರ ಸಂಖ್ಯೆ ಕಡಿಮೆಯಾಗಿರಬಹುದು!. ಎಷ್ಟೇ ಆಪ್ತರಿದ್ದರೂ ತಪ್ಪಿಗೆ ತಪ್ಪು ಎಂದು ಖಂಡಿಸಿದ್ದರಿಂದಲೇ ಸಂಬಂದಗಳ ನಡುವೆ ಮೌನದ ಅಂತರ ಜಾಸ್ತಿಯಾಗತೊಡಗಿದೆ. Senior ಅಂದುಕೊಂಡವರ ಹುಂಬು ಜ್ನಾನಕ್ಕೆ, ಅವರು ತಿಳಿ ಹೇಳುವ ನಿರ್ಧಾರಕ್ಕೆ ಪ್ರತಿಭಟಿಸಿ ಅವರ ದ್ರಷ್ಟಿಯಲ್ಲಿ ಒಂತರಾ biased target ಆದ ಅನುಭವಗಳು ಹಲವು. ಇದು ನನ್ನೊಬ್ಬನ ಬದುಕಿನ ಸತ್ಯವಲ್ಲ. ಬಹುಶ: ಬಹುತೇಕ ಎಲ್ಲರ ಬದುಕಿನಲ್ಲೂ ನಡೆದಿರಬಹುದಾದ ಅಂಶಗಳು. ಸಾಮಾಜಿಕವಾಗಿ ಎಲ್ಲರಿಂದಲೂ ಭೇಷ್ ಅನ್ನಿಸಿಕೊಳ್ಳಬೇಕಾದರೆ ಎರಡು ಮಾರ್ಗ ಸ್ಪಷ್ಟ, ಅನ್ನಿಸಿದ್ದನ್ನ ಹೇಳದೆ ಮೌನವಾಗಿ ಇರುವಂತದ್ದು......ಇಲ್ಲವಾದಲ್ಲಿ ಅನ್ನಿಸಿದ್ದನ್ನ ಬಿಟ್ಟು ಬಣ್ಣ ಹಚ್ಚಿ ಮಾತನಾಡುವಂತದ್ದು. ಎರಡೂ ಸಾದ್ಯವಾಗದಿದ್ದಲ್ಲಿ ನನ್ನ ತರಹ ನಿಷ್ಠುರ ಹುಡುಗ ಅನ್ನೋ ಬಿರುದು ಪಡೆಯಕೊಳ್ಳಬೇಕಾದೀತು!!.

ನಿಷ್ಠುರವಾದ ಸತ್ಯದ ಪರಿಧಿಯಲ್ಲಿ ಒಳಿತಿನ ಅಂಶವಾದರೂ, ದೈನಂದಿನ ಬದುಕಿನಲ್ಲಿ 'SMART' ಅನ್ನಿಸಿಕೊಳ್ಳಲಾಗದು. ಅನುಭವದ ನೆಲೆಯಲ್ಲಿ, ಇಂದಿನ ಸಂಬಂದಗಳ ನಡುವೆ ನಿಷ್ಠುರ ಸತ್ಯಕ್ಕಿಂತ, ಸಿಹಿ ಸುಳ್ಳು ಆಪ್ತವೆನಿಸುತ್ತೆ. ನೇರ ನಡವಳಿಕೆಯಿಂದ ಕೊನೆಗೆ self-comfort ಕೂಡ ಸಿಗದು ಅನ್ನೋವಂತಾ ಸ್ಥಿತಿ ನಿರ್ಮಾಣವಾಗುತ್ತೆ. ಯಾವತ್ತಾದ್ರು ನಮ್ಮವರು ಅಂದುಕೊಂಡವರಿಗಾಗುವ ಬೇಸರ, ಗೌರವ ಕೊಡುವ ವ್ಯಕ್ತಿಗಳಿಗಾಗುವ ಮುನಿಸು ಮನಸಿಗೆ ಸಂತೋಷ ಕೊಡೋಕೆ ಸಾದ್ಯಾನಾ?...ಆದರೊಂದು ಮಾತು, ಸ್ನಾನಕ್ಕಿಂತ ಮೊದಲಿನ ಸೌಂದರ್ಯ ಹೆಚ್ಚು ಹೊತ್ತು ಉಳಿಯದು, ಅಂತೆಯೇ ವಾಸ್ತವದ ಮೇಲ್ಮೈ ಹೊದಿಕೆ ಹೆಚ್ಚು ದಿನ ಸಂಬಂದವನ್ನು ನಿರ್ಮಿಸದು. ಹಾಗಾಗಿ ಸುಳ್ಳು ಇನ್ನೊಬ್ಬರನ್ನ ನೋಯಿಸದಿರಲಿ, ಹೊಗಳಿಕೆ ಇನ್ನೊಬ್ಬರ ಕಾರ್ಯ ಪಥವನ್ನು divert ಮಾಡದಿರಲಿ, ಸಮಜಾಯಿಸುವ ಮಾತು ಕಾರ್ಯ ತತ್ಪರತೆಗೆ ಅಡ್ಡಿಯಾಗದಿರಲಿ......ಅಷ್ಟಕ್ಕೂ ನಮ್ಮ ಮನಸಿಗೆ ಹತ್ತಿರವಾದವರ ದುರ್ಬಲತೆ ನಾವು ಕೇಳದೆ diplomatic ಆಗಿದ್ರೆ ಅದನ್ನ ಹೇಳೊದಾದ್ರೂ ಯಾರು? ......ಇಷ್ಟೆಲ್ಲ ಗೊಂದಲ ನಡುವೆ ಎಲ್ಲವನ್ನ ನಿಭಾಯಿಸಬಲ್ಲ ’SMART' ವ್ಯಕ್ತಿತ್ವ ನಮ್ಮದಾಗಿರಲಿ!
ದಿನು:)

3 comments:

Unknown said...

Hmm nimma baraha bahala arthagalanna nenapugalanna tandive..heghe bareyutha eri endu ashisuva nimma gelathi.

-Lilly.

Unknown said...

Indeed, thought provoking. Keep it up.

Unknown said...

Dear Dinesh,
its really so proud ofyou and my self also feeling proud that my frieand has achievd a very good job.............i wish from my heart you get more success in ur life and make us proud.........

Ur FRIEND
Pradeep