ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Wednesday, August 19, 2009

ಬರಿ ಬೋರು ಕಣೆ ಲೀನಾ...............................!!


[8 ವರ್ಷಗಳ ಹಿಂದೆ ವಿಜಯ ಕರ್ನಾಟಕ ಪತ್ರಿಕೆಯ ’ಯುವ ವಿಜಯ’ ವಿಭಾಗದಲ್ಲಿ ಪ್ರಕಟಗೊಂಡಿದ್ದ ನನ್ನ ಬರಹ !]


‘ಹಲೋ ಬಾಲು, ಇಲ್ಲೇನ್ಮಾಡ್ತಿ?‘, ಕಾಲೇಜಿನ ಕಾರಿಡಾರಿನಲ್ಲಿ ತಲೆಕೆದರಿಕೊಳ್ಳುತ್ತ ಅದೇನೋ ಗೊತ್ತು ಗುರಿಯಿಲ್ಲದಂತೆ ನಿಂತಿದ್ದ ಬಾಲುವನ್ನು ಕೇಳಿದಾಗ,"ಏನಿಲ್ಲ ದಿನು, ಬರೀ ಬೋರು.....ಟೈಮ್ ಪಾಸ್ ಆಗೋದೆ ಇಲ್ಲ ಮರಾಯ‘ ಎಂದಾಗ ಯಾಕೆ ಕ್ಲಾಸಿರ್ಲಿಲ್ವ? ಎಂದೆ. ‘ಇಲ್ಲಪ್ಪ ಬರೀ ಬೋರು, language class, ಹಾಗಾಗಿ ಬಂಕ್ (absent) ಹಾಕಿದೆ, ಕ್ಲಾಸಲ್ಲೂ ಬೋರು, ಹೊರಗಡೆ ಬಂದ್ರೆ ಇಲ್ಲೂ ಬೋರು ಎಂದು ವಿಶ್ರಾಂತಿ ಕೊಠಡಿಯತ್ತ ತೆರಳಿದ ಬಾಲುವಿನ ತೊಂದರೆ ಅವನದೊಬ್ಬನದೇ ಅಲ್ಲ. ಸಹಸ್ರ ವಿದ್ಯಾರ್ಥಿಗಳ ಅರ್ಥವಿಲ್ಲದ ಗೋಳು. ಇದರ ಜೊತೆಗೆ ಇನ್ನು, ‘ಯಾಕೆ ಮಾತಾಡ್ತ ಕುಳಿತ್ಕೊಳ್ತ್ತಿರಿ?‘ ಎಂದು ಯಾರದ್ರೂ ವಿದ್ಯಾರ್ಥಿಗಳನ್ನು ಕೇಳಿದಾಗ ಬರುವ ಉತ್ತರ ಒಂದೇ.......Time pass ಮಾಡೋಕೆ. ಯಾಕೆ reading room ಇಲ್ವಾ ಎಂದಾಗ ಅಲ್ಲಿ time pass ಆಗೋದೆ ಇಲ್ಲ ಎನ್ನುವಾಗ ಅವರು ಊಟ ಮಾಡುವುದು, ಕಾರಿಡಾರಿನಲ್ಲಿ ಪಥಸಂಚಲನ ಮಾಡುವುದು, ಕೆಲವು ಹುಡುಗಿಯರ ಗೋಳು ಹೊಯ್ದುಕೊಳ್ಳುವಂತದ್ದು ಎಲ್ಲವೂ time pass ಗಾಗಿ. ಇದನ್ನೆಲ್ಲಾ ನೋಡುವಾಗ ಯಾಕಾದ್ರೂ ಆ ಬಗ್ಗೆ ಯುವ ಮನಸ್ಸು ಚಿಂತಿಸುತ್ತೆ ಅನ್ನೋದೆ ಒಗಟಾಗಿ ಉಳಿಯುತ್ತೆ. time ಅದರಷ್ಟಕ್ಕೆ ಚಲಿಸುತ್ತೆ.....ಆ 4th dimension (4D) ವಿಷಯದ ಬಗ್ಗೆ ಯುವ ಜನತೆ ಇಷ್ಟು ಕಾಳಜಿ ವಹಿಸಿ ಪ್ರಯೋಜನವಿಲ್ಲದ ಚಿಂತನೆ ನಡೆಸುತ್ತಾರೆ ಎನ್ನುವಂತದ್ದು ದೊಡ್ಡ ಪ್ರಶ್ನೆ!. ಈ ಚಿಕ್ಕ ಆದರೆ ಸೂಕ್ಷ್ಮ ಒಗಟನ್ನು ಬಿಡಿಸಹೊರಟಾಗ, time pass ಮಾಡುವ extra ಜವಾಬ್ದಾರಿ ಯುವ ಹೆಗಲಿಗೆ ಬೀಳಲು ಕೆಲವು ಕಾರಣಗಳನ್ನು ಗುರುತಿಸಬಹುದು.


ಮೊದಲನೆಯ ಮನ:ಶಾಸ್ತ್ರೀಯ ಅಂಶವೆಂದರೆ, ಸಮಯವನ್ನು ನಾವೇ ತಲೆ ಮೇಲೆ ಹೊತ್ತು ಮಾರಾಟಕ್ಕೆ ಇಟ್ಟುಕೊಂಡಂತೆ ಗ್ರಹಿಸಿಕೊಂಡಿರುವುದು. ಯಾವುದೇ ಒಂದು ವಿಷಯದಲ್ಲಿ ಪೂರ್ತಿ ತನ್ಮಯತೆಯಿಂದ ಕೂಡಿರುವವರಿಗೆ ಸಮಯದ ಉಳಿಕೆಯ ಬಗೆಗೆ ತಲೆ ಬಿಸಿ ಇರುತ್ತದೆಯೇ ಹೊರತು ಸಮಯದ ಕಳೆಯುವಿಕೆಯ ಬಗೆಗಲ್ಲ. ಮನಸ್ಸಿನಲ್ಲಿ ಬೇರಾವ ವಿಷಯವನ್ನು ಗ್ರಹಿಸದೆ ಕೇವಲ ಸಮಯ ಕಳೆಯುವುದಷ್ಟೇ ಉದ್ಯೋಗವಾದಾಗ ಈ pass ಮಾಡುವ loss job ಕೈಗೆ ಸಿಗುತ್ತೆ. ಇತರರಿಗಿದು ಅನ್ಯತ್ರ ಅಲಭ್ಯ !


ಸ್ಪಷ್ಟ ದಿನಚರಿಯಿಲ್ಲದ ಇಂದಿನ ಯುವ ಜನತೆಯ ಜೀವನ ವಿಧಾನ ಇನ್ನೊಂದು ಕಾರಣ. ಕೇವಲ time pass ಮಾಡುವುದಷ್ಟೇ ದಿನಚರಿ ಎಂಬ ಯೋಚನಾ ಮಟ್ಟ ಬೇರಾವುದಕ್ಕೂ ಆಸಕ್ತಿ ವಹಿಸದಂತೆ ಮನಸ್ಸನ್ನು ಹಿಡಿದಿಡುತ್ತದೆ. ಪ್ರತಿಯೊಬ್ಬರೂ ಒಂದು ದಿನ ಕಳೆದು ಹೋದಾಗ "ಅಬ್ಬ ನಿನ್ನೆ ಒಳ್ಳೆಯ time pass ಆಯ್ತು, ಆದ್ರೆ ಇವತ್ತು ಬರೀ ಬೋರು’ ಎನ್ನುತ್ತಾರೆಯೇ ಹೊರತು ಇರುವ ಬದುಕಿನ ಚಿಕ್ಕ ಅವದಿಯಲ್ಲಿ ಒಂದು ದಿನ ವ್ಯರ್ಥವಾಯಿತಲ್ಲ ಎನ್ನುವ ಕಲ್ಪನೆ ಮನಕ್ಕೆ ಬರದಿರುವುದು ಹಾಸ್ಯಾಸ್ಪದ; ಅಷ್ಟೇ ಗಂಭಿರವೂ ಹೌದು. ನಾವು pass ಮಾಡುವ ಪ್ರತಿಯೊಂದು ಕ್ಷಣವೂ ನಮ್ಮನ್ನು ಸಾವಿನ toss ನತ್ತ ಹತ್ತಿರ ಮಾಡುತ್ತೆ. ಒಟ್ಟು ಬದುಕಿನ ಸಮಯದ ಬಗೆಗೆ ಗಮನ ಹರಿಸಿದರೆ ಮನುಷ್ಯನ ಪ್ರಜ್ನಾವಂತ (ದೈಹಿಕ ಹಾಗೂ ಮಾನಸಿಕವಾಗಿ ಸದ್ರಡ ಸ್ಥಿತಿಯಲ್ಲಿರುವ ಬದುಕು) ಬದುಕು ಸರಿಸುಮಾರು 50 ವರ್ಷ ಮಾತ್ರ. ಕೆಲವೊಮ್ಮೇ ಇದಕ್ಕೆ ಅಪವಾದಗಳಿರಬಹುದು. ಬದುಕು ಹತ್ತರಿಂದ ಹದಿನೈದು ವರ್ಷಗಳವರೆಗೆ ಬಾಲ್ಯವನ್ನೇ ಒಳಗೊಂಡಿರುತ್ತೆ. ಬದುಕಿನಲ್ಲಿ ತನ್ನ ಸ್ವಂತಿಕೆಯ ಉದ್ಯೋಗವನ್ನು ಹುಡುಕಿಕೊಳ್ಳುವಾಗ ಇಪ್ಪತ್ತೈದು ಕಳೆದಿರುತ್ತೆ. ಉಳಿದಂತೆ ಮದುವೆ, ಮಕ್ಕಳು ಎನ್ನುತ್ತಾ ಅಳಿದುಳಿರಿವುದು ಕೇವಲ 20 ರಿಂದ 25 ವರ್ಷ ಮಾತ್ರ!. ಆದರೆ, ಬದುಕಿನಲ್ಲಿ ಸ್ವಂತಿಕೆಯ ಬಗೆಗೆ ದ್ರಡ ಯೋಚನೆ ಮಾಡಿ ಪ್ರಯತ್ನಿಸಬೇಕಾದ ಯೌವನದ ಅವದಿಯಲ್ಲಿ ಯಾವುದರ ಬಗೆಗೂ ಅಸಕ್ತಿ ತೋರದೆ ಯಾವಾಗ ನೋಡಿದರೂ ಬೋರು ಎಂದು ಗೊಣಗುವ ವ್ಯಕ್ತಿಗೆ ಇಡೀ ಬದುಕೇ ಬೋರಾಗಿ ನಿರ್ಮಾಣವಾಗಬಲ್ಲುದು!. ಬೋರಿನ ತೇರಿನಿಂದ ಹೊರಬಂದು ಯೋಚಿಸುವ ಹೊತ್ತಿನಲ್ಲಿ ತಲೆಯ ನಡುವೆಲ್ಲೋ ಬಿಳಿಕೂದಲು ಇಣುಕಿ ಅಣುಕಿಸಿರುತ್ತೆ!


ಉತ್ತಮ ವಿಷಯಗಳಲ್ಲಿ ಆಸಕ್ತಿಯ ಕೊರತೆ, ಸಮಯವನ್ನು ಕಳೆಯುವುದೇ ಗಂಭೀರ ಸಂಗತಿ ಎನ್ನಿಸಿಕೊಳ್ಳಲು ಕಾರಣ. ಕ್ಷಣಿಕತೆಯಲ್ಲೇ ಬದುಕನ್ನು ನಿರ್ಮಿಸುವ ಪ್ರಯತ್ನ. ಕಾಣದ ಗಳಿಗೆಯಲ್ಲಿ ಎಲ್ಲೋ ಬಚ್ಚಿಟ್ಟ ಕನಸುಗಳ ಮೇಲ್ಮೈಯನ್ನು ಮುಟ್ಟಿ ಒಳಹೋಗಲಾರದೆ ಬೋರು ಎಂಬ ಆರ್ತನಾದ!. ಕಾಲೇಜಿನ ಬದುಕು ಎಂದಾಗ ಜ್ನಾನ ಪಿಪಸುಗಳಾಗಬೇಕಿರುವ ಬದುಕು. ಪ್ರತಿಯೊಂದು ಕ್ಷಣವೂ ಹೊಸ ಯೊಜನೆಯ ಹುಟ್ಟನ್ನು ಆಹ್ವಾನಿಸಬೇಕು. ಹೊಸ ಕನಸುಗಳನ್ನು ಹೆಣಿಯಬೇಕು. ಅದರ ಹೊರತಾಗಿ ಯೌವನದಲ್ಲಿಯೇ ಮುದಿತನವನ್ನು ಕಂಡಂತೆ ಕೊರಗುವ ಜನರನ್ನು ಕಂಡಾಗ, ಪುಸ್ತಕಕ್ಕೂ ಇವರಿಗೂ ಏನೋ ವೈಷಮ್ಯವಿರಬೇಕು ಅನ್ನಿಸುತ್ತೆ. ಗ್ರಂಥಾಲಯದಲ್ಲಿ ಸಿಗಬಹುದಾದ ಹೆಚ್ಚಿನ ಮೌಲ್ಯದ, ಗುಣಮಟ್ಟದ ಪುಸ್ತಕಗಳನ್ನು, ಕೊನೇ ಪಕ್ಷ ತೆರೆದು ನೋಡುವ ಸೌಜನ್ಯವನ್ನಾದರೂ ಇಂದಿನ ಯುವ ಜನತೆ ರೂಡಿಸಿಕೊಳ್ಳಬೇಕು. ಈ ಹವ್ಯಾಸವನ್ನು ಬೆಳೆಸಿಕೊಂಡ ಬೆರಳೆಣಿಕೆಯಷ್ಟು ಜನತೆಯ ಬದುಕಿನ dictionary ಯಲ್ಲಿ ಬೋರು ಎಂಬ ಶಬ್ದ ಸಿಗದು. ಕೆಲಸವಿಲ್ಲದ ಬದುಕು ರಾಡಿ ತುಂಬಿದ ಚರಂಡಿಯಂತಿದ್ದರೆ, ಕೆಲಸದಲ್ಲಿ ತಲ್ಲೀನವಾಗಿರುವ ಮನಸ್ಸು ಪ್ರಪುಲ್ಲವಾಗಿರಬಲ್ಲುದು.


ಕೊನೆಯದಾಗಿ, ಯುವ ಜನತೆ ತಮ್ಮ ಬದುಕಿಗೆ ಬೇಕಾದ ಅಂಶಗಳನ್ನು ರೂಡಿಸಿಕೊಳ್ಳಲು ಹಿರಿಯ ಹೆಜ್ಜೆಗಳನ್ನು ಸ್ಪರ್ಶಿಸಬೇಕು. ಈ ಕುರಿತಾದ ನಿರ್ಲಕ್ಷ್ಯ ನಮ್ಮ ಬದುಕಿನ model ಗಳನ್ನ ಬದಲಾಯಿಸಬಲ್ಲುದು. ಇದರಿಂದಾಗಿ ಹಿರಿತನದ ಅನುಭವದ ಬಗೆಗಿನ ಕುತೂಹಲ, ತಿಳಿದುಕೊಳ್ಳಬೇಕೆಂಬ ಹಂಬಲ ಬದಿ ಸರಿದು, time pass ಆಗೋದೆ ಇಲ್ಲ ಎನ್ನುವ ಕಲ್ಪನೆ ಮೂಡುತ್ತಿದೆ. ಇಂದಿನ ಯುವ ಮನಸ್ಸಿಗೆ ಸ್ಟಿಫನ್ ಪ್ಲೇಮಿಂಗ್ (cricketer) ಬಗ್ಗೆ ಆಸಕ್ತಿಯಿದೆ, ಆದರೆ ಸ್ಟಿಫನ್ ಹಾಕಿಂಗ್ (world famous scientist, walking with wheel chair) ಯಾರೆಂದು ತಿಳಿಯದು!. ಹೀಗಾಗಿ ನಮ್ಮ ಆಸಕ್ತಿಯ ಆಳವನ್ನು ವಿಸ್ತರಿಸಬೇಕಾಗಿದೆ. ಹಿಂದಿನ ದಿನವಿಡಿ ಕುಳಿತು ಒಂದು ಬಾಲನ್ನು ಬಿಡದೆ ವೀಕ್ಷಿಸಿದ ಕ್ರಿಕೆಟ್ ಪಂದ್ಯದ ಬಗೆಗೆ ಮರುದಿನ ದಿನ ಪತ್ರಿಕೆಯಲ್ಲಿ ಪ್ರತಿ ಅಕ್ಷರ ಹುಡುಕುವ ಕಾಯಕ ಇಂದಿನ ಮಕ್ಕಳದ್ದು !. ಸೋತ ಕಪ್ತಾನನಿಗಿರಬೇಕಾದಷ್ಟು ಗಂಭೀರ ಯೋಚನೆಗಳು ಬೇರೆ !. ಆ ಗಳಿಗೆಯಲ್ಲಿ ತಮ್ಮ optional subject ನ ನೋಟ್ಸ್ ಬಾಕಿ ಇರುವ ವಿಷಯ ಗಮನಕ್ಕೆ ಬರದಿರುವುದು ವಿಪರ್ಯಾಸ. ಇನ್ನದರೂ ಆಳ ಉದ್ದೇಶಗಳತ್ತ ಮುಖ ಮಾಡೋಣ......ಆಗ ಬೋರು ಬಳಿ ಸುಳಿಯದು.


dinu :)

2 comments:

Nitin... said...
This comment has been removed by the author.
mannu said...

chend itta mareyre nimmada?