ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Monday, August 10, 2009

ನಾ ಕಂಡ ನನ್ನದೇ ಬದುಕು.......!








{7 ವರ್ಷಗಳ ಹಿಂದೆ ನನ್ನ ಬದುಕಿನ ಬಗೆಗೆ ನಾನೇ ಗೀಚಿದ ಬರಹ........... ತೊದಲೇ ಜಾಸ್ತಿ........... ಬದುಕು ಮತ್ತಷ್ಟು.....ಬರೆದಷ್ಟು.....ಮುಗಿಯದ್ದು....ಸಮಯ ಸಿಕ್ಕಾಗ ಇನ್ನಷ್ಟು ಬರೆಯುವ ನಿರಿಕ್ಷೆಯಲ್ಲಿ...................................}


ಇನ್ನೂ ಬದುಕ ದಾರಿಯನ್ನು ಪೂರ್ಣ ಸವೆಸಿಲ್ಲ. ಎಲ್ಲೋ ಅನುಭವದ ಮ್ರದು ಸ್ಪರ್ಶವನ್ನು ಕಂಡಿದ್ದೇನೆ. ಪ್ರತಿ ಸ್ಪರ್ಶ ಕಂಡಾಗಲು ನೆನಪನ್ನೇ ಬದುಕ ಸವಿಯಾಗಿ ಸ್ವೀಕರಿಸಿದ್ದೇನೆ. ಪ್ರತಿಬಾರಿ ಬದುಕನ್ನು ನನ್ನ ವಶಕ್ಕೆ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಪ್ರತಿಬಾರಿ ಮುಂದಡಿ ಇಡುವಾಗ ಹಿಂದಿನ ಹೆಜ್ಜೆಯ ಪರಿಪೂರ್ಣತ್ವವನ್ನು ಸಾಧಿಸಲು ಪ್ರಯತ್ನಿಸಿದ್ಧೇನೆ, ಯಶಸ್ವಿಯಾಗಿದ್ದೇನೆ. ಎಷ್ಟೋಬಾರಿ ವಿಫಲಗೊಂಡಿದ್ದೇನೆ. ಆದರೆ ನಿರಾಶೆ ಮೂಡಲಿಲ್ಲ. ಇಷ್ಟೇ ತಾನೇ ಬದುಕು ಆಶಯವೊಂದೇ ಯಶಸ್ಸಿನ ದಾರಿ ಎಂದರಿತು ಮತ್ತೆ ಹಿಂತಿರುಗಿ ಇಟ್ಟಡಿಗೆ ಸ್ಪಷೀಕರಣ ನೀಡುವ ಯತ್ನ ಮಾಡಿದ್ದೇನೆ. ಅಲ್ಲೂ ವಿಫಲಗೊಂಡಾಗ, ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಮುಂದಡಿ ಪುಷ್ಟೀಕರಿಸುವ ಕಾಯಕ ಕೈಗೊಂಡಿದ್ದೇನೆ. ಸರಿ, ಇಷ್ಟೆಲ್ಲಾ ಮಾಡುವ ಮೊದಲು ನನ್ನ ಸವೆಸಿದ ಹಾದಿಯ ಕ್ಷೇತ್ರ ಪರಿಚಯ ಮಾಡದೆ ಬದುಕಿನ ಬಗೆಗಿನ ನನ್ನ ವ್ಯಾಖ್ಯಾನ ಕೇಳುಗರಿಗೆ ಓದುಗರಿಗೆ ತಿಳಿಯುವುದಾದರು ಹೇಗೆ?


ಅದೊಂದು ದಿನ ನನ್ನ ಊಹೆಯಲ್ಲಿರಲಿಲ್ಲ!. ನನ್ನ ತಂದೆತಾಯಿಯರಿಗೆ ಮಾತ್ರ ತಿಳಿದಿರಬಹುದು. ಅನೇಕ ಬಣ್ಣಗಳ ನಡುವೆ ಹೊಸ ಚುಕ್ಕಿಯ ಉದಯಕ್ಕಾಗಿ ಸ್ಮರಿಸುತ್ತಿರುವ ಪ್ರತಿಗಳಿಗೆಯು ನನ್ನ ಹುಟ್ಟಿಗೆ ಕಾರಣರಾದವರಿಗೆ ಮಾತ್ರಗೊತ್ತು!. ೧೯೮೨ರ ಜೂನ್ ತಿಂಗಳ ಶುಭ ಶುಕ್ರವಾರ. ಯಾವ ಕುಂದಿಲ್ಲದೆ, ಯಾವ ಮರೆಯಿಲ್ಲದೆ, ಬೆತ್ತಲೆಯಾಗಿ ಭೂಸ್ಪರ್ಷ, ನನ್ನ ಚರ್ಮ ಮೊದಲ ಬಾರಿ ಕಂಡದ್ದು. ಈಗ ಆ ಚರ್ಮ ಸವೆದು ಹೊಸ ಚರ್ಮ ಮುಊಡಿರಬಹುದು! ಆದರು ಆ ಸ್ಪರ್ಶ ನನ್ನನ್ನು ಚುಚ್ಚುತ್ತಿದೆ. ಕಾಲನ ಕಬಳಿಕೆ ನಿರಂತರವಾಗಿತ್ತು. ಚಿಕ್ಕ ಪುಟ್ಟ ಹೆಜ್ಜೆ ಇಡುವಷ್ಟರವರೆಗೆ ಬೆಳೆದೆ. ಅಷ್ಟೇನೂ ಶ್ರೀಮಂತರೂ ಅಲ್ಲದ, ಬದವರೂ ಅಲ್ಲದ ಮದ್ಯಮ ಕುಟುಂಬ. ತಾಯಿ ಮ್ರದುತಲ್ಪ. ತಂದೆಯ ಗಂಭೀರ ವ್ಯಕ್ತಿತ್ವ. ಅದನ್ನು ಬರಿಸಿಕೊಳ್ಳಲು ಈಗೀಗ ಕನ್ನಡಿ ಮುಂದೆ ನಿಂತು ಪ್ರಯತ್ನಿಸುತ್ತಿದ್ದೇನೆ!! ಎಲ್ಲದರಲ್ಲೂ ಹಿರಿತನದ ಪ್ರಭಾವ. ಶಾಂತ ಪರಿಸರ. ಸ್ವಲ್ಪ ಪ್ರಮಾಣದ ಬಡತನದ ಬೇಗೆ ಆಗಾಗ ಕುಟುಂಬವನ್ನು ಬಾದಿಸುತ್ತಿತ್ತು. ಎಸ್ಟೋ ಬಾರಿ ಅನ್ನ ಹುಡುಕಿದ ನೆನಪು ಕಣ್ಣನ್ನು ಕಟ್ಟುತ್ತಿದೆ. ಯಾಕೆಂದರೆ ಈಗ ಆಗ ಊಟ ಮಾಡಿದ್ದಕ್ಕಿಂತ ಹೆಚ್ಚು ಹಾಳು ಮಾಡುತ್ತಿದ್ದೇವೆ. ಕ್ರಷಿ ಪ್ರಧಾನ ಕುಟುಂಬ. ಇಬ್ಬರು ಅಣ್ಣಂದಿರ ಪ್ರೀತಿ ಅಕ್ಕನ ವಾತ್ಸಲ್ಯ. ಆವಾಗ ತುಂಬಾ ಗುಂಡಗಿದ್ದೆನಂತೆ. ಯಾರಿಗೆ ಗೊತ್ತು? ಭೂತದ ಘಟನೆಗಳೂ ಕೆಲವೊಮ್ಮೆ ಭವಿಷ್ಯವಾಗಿ ಬಿಡುವುದುಂಟು! ಇದು ಆಶ್ಚರ್ಯವಲ್ಲ. ನಿರೀಕ್ಷೆ? ಆ ಗಳಿಗೆ ಇನ್ನು ಬರಬೇಕಾದ್ದು ನನ್ನ ಮಕ್ಕಳ ಚಟುವಟಿಕೆ ನೋಡಿದ ಮೇಲೆಯೇ. ಅಲ್ಲಿಯವರೆಗೆ ಎಲ್ಲವೂ ಮರಳಿನಲ್ಲಿ ಮನೆ ಕಟ್ಟುವ ಪ್ರಯತ್ನ!. ಇದ್ದ ಗದ್ದೆಯನ್ನು ವ್ಯವಸಾಯ ಮಾಡಿ ಬದುಕುತಿದ್ದ ನಮ್ಮ ಬದುಕಿನಲ್ಲಿ ಚಿಕ್ಕಂದಿನಿಂದಲೇ ನನಗೆ ಸಿಕ್ಕ ಕೊಡುಗೆಗಳೆಂದರೆ, ಮರ‍್ಯಾದಸ್ಥ ಗುಣ, ನಿರ್ಬಿಡತೆ (Frankness) ಮತ್ತು ಬಾವನಾತ್ಮಕ ಸಂಬಂದ. ಈಗಲೂ ನಾನು ಬೆತ್ತಲೆಯಾಗಿ ಓಡಾಡಿದ, ಆಟವಾಡಿದ ಓಣಿ ನೆನಪಿದೆ; ಆದರೂ ಈವರೆಗೆ ನನಗೆ ಭೂತದ ಸ್ಥಿತಿಯಾಗಲು ಸಾದ್ಯವಾಗಲೇ ಇಲ್ಲ !!. ಎಷ್ಟೆಂದರೂ ಬಾಲ್ಯ ಮಾತ್ರ ಬಾಲ್ಯ ತಾನೇ?, ಏಗದು ಬರೀ ನೆನಪು. ಜ್ನಾನ ದೇಗುಲದ ಮೆಟ್ಟಿಲು ಸ್ಪರ್ಶಿಸುವ ದಿನ ಕೂಡ ಎದುರಾಯಿತು. ಕುಳ್ಳಗೆ ದಪ್ಪಗಿದ್ದ ನನಗೆ ಕೈಯನ್ನು ಮೇಲೆ ಚಾಚಿ ಕಿವಿಯ ಕೆಳ ಭಾಗದವರೆಗೆ ಬರುತ್ತದೆಯಾ ನೋಡು ಎಂದು ಹೇಳಿದ ನನ್ನ ಪ್ರೈಮರಿ ಮೇಷ್ಟ್ರ ಗಡಸು ಸ್ವರ ಹೆಪ್ಪುಗಟ್ಟಿ ನಿಂತಿದೆ. ಆಗಲೇ ನನ್ನ ಬದುಕಿನ ಪ್ರಥಮ Influence ಹೆಜ್ಜೆ ಅರಂಭವಾದದ್ದು. ಇದು ತಿಳಿದದ್ದು ಮಾತ್ರ ಬುದ್ದಿ ಸರಿಯಾಗಿ ಬಂದ ಮೇಲೆಯೇ !. ೨೫ ರೂ ಜಾಸ್ತಿ ಕೊಟ್ಟು ೧ ವರ್ಷ ಮೊದಲೇ ಶಾಲೆಯತ್ತ ದಾವಿಸಿದ್ದೆ. ಬದುಕಿನ ಉಚ್ಚ್ರಾಯದ ದಿನಗಳು ಬಹುಶ: ಅದೇ ಇರಬಹುದು. ಬೇಲಿರಹಿತ, ತಂತಿರಹಿತ, ಮಾರ್ಗರಹಿತ ಬದುಕದು. ಆದರೂ ಸ್ಪರ್ಶವಿದೆ !, ಅದನ್ನು ನಾನು ಅನುಭವಿಸಿರಲಿಲ್ಲ. ಎಷ್ಟೆಂದರೂ ನಾನು ಚಿಕ್ಕವ ತಾನೆ?

ದಿನದಿಂದ ದಿನಕ್ಕೆ ಎಲ್ಲದರಲ್ಲೂ ಬೆಳೆಯುತ್ತ ಸಾಗಿದೆ. ದೇವರ ದಯೆಯಿಂದ ಚಿಕ್ಕಂದಿನಿಂದಲೇ ಪ್ರೋತ್ಸಾಹ ನನ್ನ ಬೆನ್ನುಜ್ಜಿ ಏಳಿಸುತಿತ್ತು. ಏಗಲೂ ಕೂಡ !. ಭಾಷಣ, ಮಾತುಗಾರಿಕೆ ಚಿಕ್ಕಂದಿನಿಂದ ನನ್ನ ನಾಲಿಗೆಗೆ ಒಲಿದವು. ತಲೆಗೆ ವಿದ್ಯೆಯ ಸವಿಯು ಹಿಡಿಸಲಾರಂಭಿಸಿತು. ನಿರಾಳವಾಗಿ ಯಾವ ಅಡೆತಡೆಯಿಲ್ಲದೆ SSLC ವರೆಗೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದೆ. ನನ್ನ ಬದುಕಿನ ವಿದ್ಯೆಯ ಬೆಳವಣಿಗೆಯ ಗೆರೆ ಮೊದಲು ಹಿಂದೆ ಚಲಿಸಿದ್ದು ಪ್ರಥಮ PUC ಗೆ ಕಾಲಿಟ್ಟಾಗ !, ಆದರೂ ಅದನ್ನು ಪುನ: ಬದುಕಿನಲ್ಲಿ ಪಡೆದಿದ್ದೇನೆ ಎಂಬುದಂತೂ ಶತಾಂಶ ಸತ್ಯ. ನನ್ನಕ್ಕನಿಗೆ ಒಂದು ಕೊಡೆ, ಆದರೆ ಮರದ ಜಲ್ಲಿನ ಒಂದು ದೊಡ್ಡ ಕೊಡೆಯಡಿಯಲ್ಲಿ ಕೈ-ಮೈ ಹಿಡಿದುಕೊಂಡು ಮೂರು ಜನ (ತ್ರಿಮೂರ್ತಿಗಳು) ದಿನಾಲೂ ಶಾಲೆಗೆ ಹೋಗುತ್ತಿದ್ದುದು ಇನ್ನೂ ನೆನಪಿದೆ. ಆಗಲೇ ನನಗೆ ಸುಧಾರಿಸಿಕೊಳ್ಳುವ ಮನ:ಸ್ಥೈರ್ಯ ಬಳುವಳಿಯಾಗಿ ಬಂದಿತ್ತು. ನನ್ನ ಅಣ್ಣಂದಿರು ಕೂಡ ನನ್ನ ಬದುಕಿನ ಬಲು ದೊಡ್ಡ Model ಗಳು ಎಂದರೆ ತಪ್ಪಿಲ್ಲ. ಅವರಿಬ್ಬರು ಸಹ ಕಲಿಯುವಿಕೆಯಲ್ಲಿ ಎಲ್ಲರಿಗಿಂತ ಮುಂದೆ. ಬದುಕಿನ ಬಹು ದೊಡ್ಡ ಕಹಿ ಅನುಭವ ದೊರೆತದ್ದು 80 ಸರಾಸರಿ ಅಂಕ ಪಡೆದ ನನ್ನ ದೊಡ್ಡಣ್ಣ ಹೋಟೆಲ್ ಕೆಲಸಕ್ಕಾಗಿ ಹೊರ ಊರಿಗೆ ತೆರಳಿದ್ದು !, ಛೇ; ವರ್ತಮಾನ ಭೂತಕ್ಕಿಂತ ಎಷ್ಟು ಭಿನ್ನ ಎನಿಸುತ್ತಿದೆ. ಆಗಲೇ ಬದುಕಿನ ತೀವ್ರತೆ ಅರ್ಥವಾಗತೊಡಗಿದ್ದು. ಬದುಕಿನಲ್ಲಿ ಹೀಗೂ ಉಂಟಾ? ಎಂಬ ಪ್ರಶ್ನೆ ಮೂಡಿದ್ದು. ಚಿಕ್ಕಂದಿನಿಂದಲೇ ಎಲ್ಲಿ ಹೋದರೂ ಬಹುಮಾನ, ಸ್ಪರ್ದಾಪುರುಷೋತ್ತಮ award ಗಳು. ನನ್ನ ಅನಂದ ಆವಾಗ ಎಲ್ಲೆ ಮೀರಿತ್ತು. ಆದರೆ ಅದರ ಗಂಭಿರತ್ವ ನನಗೆ ಅರ್ಥವಾಗಿರಲಿಲ್ಲ. ನನಗೀಗಲೂ ಅ ಕೊರಗು ಹೋಗಿಲ್ಲ !. ಸಂಗೀತ ಕಲಿಯಬೇಕೆಂಬುದು ನನ್ನ ಬಹುದೊಡ್ಡ ಕನಸಾಗಿತ್ತು, ಆದರೆ ವಿಧಿ ಲೀಲೆಯೇ ಬೇರೆ ಆಗಿತ್ತು. ಗಡಸು ಸ್ವರ, ಹಾಗಾಗಿ ಕನಸು ಕನಸಾಗೆ ಉಳಿದಿತ್ತು. ನನ್ನ ಬದುಕಿನ ಬಹುದೊಡ್ಡ ಅಂಶವೆಂದರೆ ನನ್ನ ಧನಾತ್ಮಕ ಮತ್ತು ರಣಾತ್ಮಕ ಅಂಶಗಳ ಬಗೆಗೆ ದಿನಾಲೂ ಪ್ರಶ್ನಿಸಿಕೊಳ್ಳುವಂತದ್ದು. ಎಂಟನೇ ತರಗತಿಯಿಂದಲೇ ಆ ನಿರ್ಧಾರಕ್ಕೆ ಬಂದಿದ್ದೆ. ಮೊದಲಿನಿಂದಲೂ ಭಾವನಾತ್ಮಕ ಜೀವಿ. ಬದುಕಿನ ಪ್ರತಿಸ್ತರದಲ್ಲೂ ಜೀವಿತ ಅಂಶ ಕಾಣಬಯಸುವವನು. ದನ ಕರುವನ್ನು ನೆಕ್ಕಿದಾಗ ಸಿಗುವ ಅವ್ಯಕ್ತ ಸಂತೋಷದಂತೆ , ಮೌನದಲ್ಲಿ ಮೊದಮೊದಲು ಸಂತೋಷ ಸಿಗುತಿತ್ತು. ಆದರೆ ಅದು ಮುರಿದದ್ದು ಹೈಸ್ಕೂಲಿನಲ್ಲಿ ನಡೆದ ಒಂದು ಘಟನೆಯಿಂದ. ಅದು ನನ್ನ ಬದುಕಿನ ದೊಡ್ಡ ಕಪ್ಪು ಚುಕ್ಕೆ !. ಹೇಗೋ ಅದರಿಂದ ಹೊರಬರುವ ಯತ್ನ ಮಾಡಿ ಯಶಸ್ವಿಯಾದೆ. ಅದರ ಫಲವೇ ನಾನು ಕುಂದಾಪುರ ಬಿಟ್ಟು PUC ವ್ಯಾಸಂಗಕ್ಕಾಗಿ ಉಜಿರೆ SDM ಕಾಲೇಜಿಗೆ ತೆರಳಿದ್ದು. SSLC ಮುಗಿದ ನಂತರ ಪ್ರತಿ ದಿನವೂ ಸಯಂಕಾಲ ಮಲಗುವ ಮೊದಲು ಕೋಣಿಯ ಚಿಲಕ ಹಾಕಿ 10 ನಿಮಿಷ ದಿನದ ಬಾವುಕಗಳಿಗೆ ನೆನೆದು ಅಳುತ್ತೇನೆ, ಈಗಲೂ ಕೂಡ !. ಅದೀಗ ನನ್ನ ದಿನಚರಿಯಾಗಿ ಬಿಟ್ಟಿದೆ !. ನನ್ನ ಬದುಕಿನಲ್ಲಿ ನಾ ಕಂಡ ಸತ್ಯವೆಂದರೆ, ಬದುಕಿನಲ್ಲಿ ಯಾವುದನ್ನು ಬೇಕು, ಆಗಬೇಕು ಎಂದೆಣಿಸಿದ್ದೆನೋ ಅದರಲ್ಲಿ ಒಂದೂ ಆಗಲಿಲ್ಲ. ಹಾಗಾಗಿ ಈಗೀಗ ಅ ಬಗ್ಗೆ ಯೋಚಿಸುವ ಗೋಜಿಗೆ ಹೋಗುವುದನ್ನು ಬಿಟ್ಟಿದ್ದೇನೆ. ಈಗ ನನ್ನ ನಿರ್ಧಾರ ಸ್ಪಷ್ಟ. ಕಾಲನನ್ನು ನಮ್ಮ ದಿನಚರಿಗೆ ನಿಯಂತ್ರಿಸುವ ಯತ್ನ ಬಿಟ್ಟು, ನಮ್ಮ ನಿರ್ಧಾರಗಳಿಗೆ ಒಲಿಸಿಕೊಳ್ಳುವ ಕಾರ್ಯ ಬಿಟ್ಟು, ಕಾಲದೊಂದಿಗೆ ಸವೆಸುವ ದಾರಿ ಕಂಡುಕೊಳ್ಳುವತ್ತ ಸಾಗಿದ್ದೇನೆ. ಆದರೆ ಯಶಸ್ವಿಯಾಗಿದ್ದೇನೆ ಎನ್ನಲಾರೆ. ಎಷ್ಟೆಂದರೂ ಬಾಲ್ಯದ ಗುಣವನ್ನು ಪೂರ್ಣ ತೊರೆಯಲಾದೀತೆ?.

ಛೇ, ನಾನು ಬದುಕಿನಲ್ಲಿ ಬಂದೊದಗಿದ ಎಷ್ಟೆಷ್ಟೋ ವಿಪುಲ ಅವಕಾಶಗಳನ್ನು ಕೈಚೆಲ್ಲಿ ಕುಳಿತಿದ್ದೆ. ಅದರಲ್ಲೂ ನಾ ಕೈಗೊಂಡ ನಿರ್ಧಾರಗಳಲ್ಲಿ ಆಶ್ಚರ್ಯವಾಗಬಹುದಾದ ನಿರ್ಧಾರವೆಂದರೆ, ದ್ವಿತೀಯ PUC ಆದ ನಂತರ ವ್ರತ್ತಿಪರ ಶಿಕ್ಷಣವನ್ನು ತಿರಸ್ಕರಿಸಿದ್ದು !. ಅಂಕಗಳಿಗೇನು ಕೊರತೆಯಿರಲಿಲ್ಲ. CET rank ಕೂಡ ಉಜ್ವಲ ದಾರಿ ಒದಗಿಸಿತ್ತು. ಯಾರೂ ನಂಬಲಾರದ ಸತ್ಯವೆಂದರೆ ಯಾವ ಕೋಚಿಂಗಿಗೂ ಹೋಗದೆ CET ಯಲ್ಲಿ 621 ನೇ rank ಬಂದಿತ್ತು. ನಂಬಲಸದಳ ಕೂಡ !. ಆದರೆ ದಿಟ್ಟ ಕ್ರಮ ಕೈಗೊಂಡು ಈಗಲೂ ನನ್ನ ಸಂಬಂಧಿಕರ ಛೀ, ತೂ ಎಂಬ ಮಾತುಗಳಿಗೆ ಬದುಕಿನಲ್ಲಿ ವೇದಿಕೆ ನಿರ್ಮಿಸಿಕೊಂಡೆ.


ಇದು ಚಿಕ್ಕ ಬದುಕಿನ ಚೊಕ್ಕ ಚಿತ್ರಣ. ಆದರೂ ಎಷ್ಟೋ ಬಾರಿ ಹಳೆಯ ನೆನಪುಗಳನ್ನು ಚುಚ್ಚಿ ಚುಚ್ಚಿ ನೋಡಿದ್ದೇನೆ. ರುಚಿ ಕಂಡುಕೊಳ್ಳಲಾಗದೆ ಅತ್ತಿದ್ದೇನೆ. ಬದುಕ ಚಿತ್ರಪಟ ಕೈಯಲ್ಲಿ ಹಿಡಿದು ಎಷ್ಟೋ ಬಾರಿ ಮೌನಿಯಾಗಿದ್ದೇನೆ. ಹುಚ್ಚನಂತೆ ವರ್ತಿಸಿದ್ದೇನೆ. ಆದರೆ ನನ್ನ್ಯಾವ ಬಾವನೆಗಳೂ ಅದಕ್ಕೆ ಬೆನ್ನು ತಟ್ಟಲಿಲ್ಲ. ರಾತ್ರಿ ಅದಕ್ಕಾಗಿ ಅತ್ತಿದ್ದೇನೆ. ಬದುಕಿನ ಎಷ್ಟೋ ಆದರ್ಶಗಳು ಅರ್ಥಕಂಡುಕೊಳ್ಳಲಾರವು ಎಂಬ ಕೊರಗು ಇನ್ನೂ ಇದೆ. ಈ ದಿಶೆಯ ಯೋಚನೆ ಹರಿದಾಗ ಸಾಹಿತ್ಯ ನನಗೆ ಸಾಂತ್ವನ ನೀಡಿತು. ಅದರತ್ತ ವಾಲಿದೆ. ಸ್ವಲ್ಪ ಪ್ರಮಾಣದಲ್ಲಿ ಪೆನ್ನಿನ ಮೊನೆಗೆ ಕಸರತ್ತು ಕೊಡುವ ಯತ್ನ ಮಾಡಿದೆ. ಅದರ ಫಲವೇ ರಾಜ್ಯ ಮಟ್ಟದ ಕವನಗಳ ಸಂಗ್ರಹ ‘ಅನ್ವೇಷಣಿ‘ ಪುಸ್ತಕದಲ್ಲಿ ನನ್ನ ಕವನವೂ ಒಂದಾಗಿ ಪ್ರಕಟಗೊಂಡಿತು. ಜನವಾಹಿನಿಯ ‘ದ್ರಷ್ಟಿಕೋನ‘ದಲ್ಲಿ ಹಲವಾರು ಲೇಖನಗಳು ಪ್ರಕಟಗೊಂಡವು. ಬಹುಮಾನಗಳು ಕೈ ಸ್ಪರ್ಶಿಸಿದವು. ತರಂಗ, ಉದಯವಾಣಿ ಮುಂತಾದ ಪತ್ರಿಕೆಗಳು ಮನದ ಸ್ಪಂದನಗಳಿಗೆ ವೇದಿಕೆಯಾದವು. ಎಲ್ಲಕ್ಕಿಂತ ಮುಖ್ಯವಾಗಿ ಈ ಬರಹಗಳು ಬದುಕನ್ನು ಪ್ರೀತಿಸುವ ದಾರಿ ತೋರಿದವು. ಎಷ್ಟೋ ಮಧುರ ಬಾಂದವ್ಯಗಳನ್ನು ಕೂಡಿ ಹೊಸೆದವು. ರಾಜ್ಯ ಮಟ್ಟದಲ್ಲೂ ಕತೆ ಆಯ್ಕೆಯಾಗುವವರೆಗೆ ಪ್ರಯತ್ನ ಯಶಸ್ವಿಯಾಯಿತು. ಹೆಜ್ಜೆ ಇನ್ನೂ ಮುಂದೆ ಸಾಗುವುದರಲ್ಲಿದೆ............................................

ಹ್ಲೂ, ಬಯಸಿದ್ದು ವಿಜ್ನಾನ, ಅನುಭವಿಸುತ್ತಿರುವುದು ಸಾಹಿತ್ಯ, ದಿನಚರಿ ಹರಟೆ, ಸಂಬಂಧ ಭಾವನಾತ್ಮಕ....ಹೀಗೆ ಹಲವು ಮುಖಗಳ ಬದುಕು ನನಗೆ ಖುಷಿ ಕೊಡಲಾರಂಭಿಸಿತು. ಆದರೆ ಒಂದೇ ಮುಖವನ್ನು ನೋಡಿದ ಕೆಲವರಿಗೆ ನನ್ನನ್ನು ಕಂಡಾಗ ಮೈಮೇಲೆ ಕೆಂಡ ಸುರಿವಂತಾಗುವುದುಂಟು. ದೇವರು ಅವರನ್ನು ತುಪ್ಪದಲ್ಲೇ ಇಟ್ಟಿರಲಿ !. ಹೀಗೆ ಬದುಕಿನ ಬಗೆಗೆ ನಿಡಿದಾದ ನಿಟ್ಟುಸಿರನ್ನು ಕೈಯಲ್ಲಿ ಹಿಡಿದು ಮುಂದೆ ಸಾಗುತ್ತಿದ್ದೇನೆ. ಆ ದಾರಿಯಲ್ಲಿ, ‘ಹುಡುಕುತ್ತಿದ್ದೇನೆ, ಭೂತದ ನೆನಪುಗಳನ್ನು; ಅರಸುತ್ತಿದ್ದೇನೆ ಭವಿಷ್ಯದ ಕನಸುಗಳನ್ನು; ನಿರೀಕ್ಷಿಸುತ್ತಿದ್ದೇನೆ ವರ್ತಮಾನದ ವಾಸ್ತವವನ್ನು; ಸ್ವೀಕರಿಸುತ್ತಿದ್ದೇನೆ ಕೈಯೆದುರೇ ನುಸುಳಿಕೊಳ್ಳುವ ಗಳಿಗೆಯನ್ನು‘..........................ಆದರೂ ಎಷ್ಟೋ ಬಾರಿ ಭೂತ ಕಳೆದದ್ದು, ಭವಿಷ್ಯ ಕಲ್ಪಿಸಲಾಗದ್ದು....ಇಷ್ಟಿದ್ದೂ ವರ್ತಮಾನ ಕೈಯಿಂದ ನುಸುಳಿಕೊಳ್ಳುವುದೇಕೆ? ಎಂಬ ಪ್ರಶ್ನೆಯನ್ನು ಮುಂದೊಡ್ಡಿ ಮುಂದೆ ಸಾಗುತ್ತಿರುವ........

ನಿಮ್ಮ ದಿನು

4 comments:

Unknown said...

ನಿಮ್ಮ life ಬಗ್ಗೆ ಮೊದಲೇ ಗೊತ್ತಿದ್ರು ಅದನ್ನ express ಮಾಡಿರೋ ಶೈಲಿ ತುಂಬನೇ ಇಷ್ಟ ಆಯ್ತು. ಕೆಲವೊಮ್ಮೆ ಬದುಕಿನ ಅನುಭವಗಳೇ ನಮಗೆ ಸ್ಪೂರ್ಥಿ ಕೊಡುತ್ತೆ ಅನ್ನೊದಕ್ಕೆ ನೀವೇ ಸಾಕ್ಷಿ...:)

Fantastic Work! keep it up...

Shilpa said...

wow...great effort in articulating your life in one page!!! Gotto know few more things about your life which I didn’t know....!!

The way you have expressed ups & downs in the journey of life is really amazing. I have so engrossed in your Badukina Baraha that I didn't even realize tears were just dropping on my cheeks...!!

I can’t believe that you are so matured & perfect in this small age......:)

You see, in life, lots of people know what to do, but few people actually do what they know.
Knowing is not enough! one must take action...I think you are the one who did it.
Hats-off to u dear dinu for the courage you have shown in life… no words….!!

You are always admired & respected a lot…:)


Cheers!!
Cninni

Shilpa said...

Hoi aa chann gand yar andeli gottailaaa..!!! gurtve sikkudillapa..:)
Itlai salpa chanda adangittapa jana..hhaha.. just kiding:-)

Keep posting dinu..:)

Guess? said...

Chennaagide baraha matte nimma jeevana chitrana...