ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Thursday, March 18, 2010

ಎಲ್ಲರ ಹುಡುಕಾಟವೂ ಒಂದೇ....?

ವಾಸ್ತವವಾಗಿ ಭೂತ ಕಳೆದದ್ದು, ಭವಿಷ್ಯ ಕಲ್ಪಿಸಲಾಗದ್ದು. ಆದರೂ.... ಕಣ್ಣೆದುರಿಗಿರುವ, ಕೈಯಿಂದ ಹಿಡಿದಿಡಬೇಕಾದ ವರ್ತಮಾನ ನುಣುಚಿಕೊಳ್ಳುವುದೇಕೆ? ಎಂಬ ಪ್ರಶ್ನೆಯ ಉತ್ತರಕ್ಕಾಗಿ ಪ್ರತಿ ದಿನವೂ ಹುಡುಕಾಟ ಸಾಮಾನ್ಯ ಅನ್ನಿಸುತ್ತೆ. ಇದೆ ಎಂದುಕೊಂಡಾಗಲೆಲ್ಲಾ ಇಲ್ಲವಾಗುವಂತದ್ದು, ಏನೂ ಇಲ್ಲವೆಂದುಕೊಂಡರೂ ಹೊಸ ಸವಾಲುಗಳು, ಬದಲಾವಣಿಗಳು ಮುತ್ತಿಕೊಳ್ಳುವಂತದ್ದು ಸಾಮಾನ್ಯ. ಆದರೆ ಎಲ್ಲರ ಹುಡುಕಾಟವೂ ಅದೇ...ನೆಮ್ಮದಿ, ಸಂತೋಷ!. ಬುದ್ಧ ಬೋದಿ ವ್ರಕ್ಷದ ಬಳಿಗೆ ತೆರಳಿದ್ದು, ಮಹಾವೀರ ಸಾಧನೆಗೈದದ್ದು ಎಲ್ಲವೂ ಬದುಕಿನ ಪರಿಪೂರ್ಣತೆಗಾಗಿ. ಅಲ್ಲೋ, ಇಲ್ಲೋ ಸಿಗುವ ಬದುಕಿನ ಅರ್ಥದ ಹುಡುಕಾಟಕ್ಕಾಗಿ!. ಯಾರು ಯಾವ ರೀತಿಯಲ್ಲಿ ಹುಡುಕಿದರೂ ಬದುಕು ಅವರವರ ನೇರಕ್ಕೆ ಮಾತ್ರ ಸಿಲುಕುವಂತದ್ದು. ಅನ್ಯರ ಬದುಕಿನ ಸವೆತ ಕೆಲವೊಮ್ಮೇ ಪ್ರೇರಣಿಯಾಗಬಲ್ಲುದೇ ಹೊರತು, ಬೇರೆಯವರು ಸವೆಸಿದ ಹಾದಿ ನಮ್ಮ ಬದುಕನ್ನು ನಿರ್ಮಿಸಲಾರದು.
ಪ್ರತಿ ಬಾರಿ ಅನುಭವದ ಮ್ರದು ಸ್ಪರ್ಶವನ್ನು ಕಂಡಾಗ ನೆನಪುಗಳನ್ನು ಬದುಕ ಸವಿಯಾಗಿ ಸ್ವೀಕರಿಸಬೇಕು. ಬದುಕನ್ನು ಸಮಾಜದ ನೇರಕ್ಕೆ ಕಂಡುಕೊಳ್ಳುವ ಯತ್ನ ನಮ್ಮಿಂದಾಗಬೇಕು. ಪ್ರತಿ ಬಾರಿ ಮುಂದಡಿ ಇಡುವಾಗ ಹಿಂದಿನ ಹೆಜ್ಜೆಯ ಪರಿಪೂರ್ಣಕ್ಕಾಗಿ ಸ್ರಮಿಸಿರಬೇಕು. ಯಶಸ್ವಿಯಾಗದಿದ್ದರೆ.....ನಿರಾಶೆ ಪಡಬಾರದು. ಇಷ್ಟೇ ತಾನೆ ಬದುಕು, ಆಶಯವೊಂದೇ ಯಶಸ್ಸಿನ ದಾರಿ ಎಂದರಿತು ಹಿಂತಿರುಗಿ ಇಟ್ಟಡಿಗೆ ಸ್ಪಷ್ಟೀಕರಣ ನೀಡುವ ಯತ್ನ ಮಾಡಬೇಕು. ಅಲ್ಲೂ ವಿಫಲಗೊಂಡರೆ ....ಆ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮುಂದಡಿ ಪುಷ್ಟೀಕರಣ ಕಾಯಕ ಕೈಗೊಳ್ಳುವಂತವರಾಗಬೇಕು!. ಆಗ ಬದುಕಿನರ್ಥದ ಹುಡುಕಾಟಕ್ಕೆ ಅರ್ಥ ಸಿಗುತ್ತೆ ಅನ್ನಿಸುತ್ತೆ. ಎಲ್ಲದಕ್ಕೂ depend ಆಗುವಂತದ್ದು ಕೂಡ ಒಂದು ದೌರ್ಬಲ್ಯ. ಬದುಕಿನ ನಿರ್ಧಾರ ಮೂಡಬೇಕಾದದ್ದು ಪ್ರತಿ ಮನಸಿನಿಂದ. ಪರಿಸರ, ಹಿರಿಯರ ಹಾದಿ ಎಲ್ಲವೂ ಪೂರಕ ಅಂಶಗಳು. ಬದುಕಿನ ಪುಸ್ತಕದಲ್ಲಿ ಒಳ್ಳೆಯ ನಿರ್ಧಾರಗಳೇ ಮುನ್ನುಡಿಯಾಗಬೇಕು. ಪುಸ್ತಕ ತೆರೆದಾಗ ಇಡೀ ಪುಸ್ತಕದ ಉದ್ದೇಶ ಮುನ್ನುಡಿಯಿಂದಲೇ ಅರ್ಥವಾಗಬೇಕು. ಆಗ ಮಾತ್ರ ಓದಲು ಆಸಕ್ತಿ ಮೂಡೀತು....

ಕೆಲವೊಮ್ಮೆ ಭೂತದ ಘಟನೆಗಳೂ ಭವಿಷ್ಯವಾಗಿ ಬಿಡುವುದುಂಟು!..ಇದು ಆಶ್ಚರ್ಯವಲ್ಲ ..ಬದಲಿಗೆ ನಿರೀಕ್ಷೆ...!. ಎಷ್ಟೋ ಬಾರಿ ಕಳೆದ ಗಳಿಗೆಯ ನೆನಪಾದಾಗಲೆಲ್ಲಾ ಹಿಂದೆ ಓಡಬೇಕೆನಿಸುತ್ತೆ. ನಾವೇನೋ ಕಳೆದು ಬಂದಿದ್ದೇವೆ ಎಂದೆಣಿಸಿದಾಗಲೆಲ್ಲಾ ಮರಳಿ ಹಿಂದೆ ವ್ಯಾಪಿಸಬೇಕೆನಿಸುತ್ತೆ. ಆದರೆ ನಿರೀಕ್ಷೆಗಳ ಸಂಘರ್ಷದಲ್ಲಿ ಪ್ರತಿದಿನದ ಹುಡುಕಾಟ, ತೆರಳಬೇಕಾದ ದಾರಿ ಮಾತ್ರ. ಬದುಕಿನ ಉಚ್ಚ್ರಾಯ ಅಂಶಗಳೇನೆ ಇದ್ದರೂಹೊಸ ಕಲ್ಪನೆಗಳು ಗರಿಗೆದರಿದಾಗ ಹುಡುಕಾಟ ಇದ್ದದ್ದೇ. ಹಾಗಾಗಿಯೆ ನಾವು ಶಿಲಾಯುಗ ದಾಟಿ ಕಂಪ್ಯುಟರ್ ಯುಗಕ್ಕೆ ಕಾಲಿಟ್ಟದ್ದು. ಬದುಕಿನ ದಿನಗಳಲ್ಲಿ ಯಾರು ಸ್ರಷ್ಟಿಕರ್ತರಲ್ಲ. ಸ್ವಂತಿಕೆ ಸ್ವಲ್ಪ ಮಟ್ಟಿಗೆ ಇದ್ದರೂ ಮೂಲ ಪಡಿಯಚ್ಚು ಒಂದೇ......ಅದುವೆ ನೆರಳಿನಡಿ ಗುದ್ದಾಟ!!.ಎಷ್ಟೋ ಬಾರಿ ನಾನು ಹಎಯ ನೆನಪುಗಳನ್ನು ಚುಚ್ಚಿ ನೋಡಿದ್ದೇನೆ. ಎಲ್ಲರೂ ಹುಡುಕುವಾಗ ರುಚಿ ಕಂಡುಕೊಳ್ಳಲಾರದೇ ಅತ್ತಿದ್ದೇನೆ. ಬದುಕ ಚಿತ್ರಪಟ ಕೈಯಲ್ಲಿ ಹಿಡಿದು ಎಷ್ಟೋ ಬಾರಿ ಮೌನಿಯಾಗಿದ್ದೇನೆ. ಆದರೆ ಬದುಕಿನ ಯಾವ ಭಾವನೆಗಳೂ ಅದಕ್ಕೆ ಬೆನ್ನು ತಟ್ಟಲಿಲ್ಲ. ಬದುಕಿನ ಎಷೋ ಆದರ್ಶಗಳು ಅರ್ಥ ಕಂಡುಕೊಳ್ಳಲಾರವು ಎಂಬ ಕೊರಗು ಸಾಮಾನ್ಯ. ಈ ದಿಶೆಯ ಯೋಚನೆ ಮೂಡಿದಾಗಲೆಲ್ಲಾ ಭವಿಷ್ಯದ ಕನಸುಗಳನ್ನು ಅರಸುವಂತವರಾಗಬೇಕು. ವರ್ತಮಾನದ ವಾಸ್ತವವನ್ನು ನಿರೀಕ್ಷಿಸುವಂತವರಾಗಬೇಕು. ಒಟ್ಟಾರೇ ಎಲ್ಲರ ಹುಡುಕಾಟವೂ ವರ್ತಮಾನದ ಸಂತೋಷ, ನೆಮ್ಮದಿ ಮತ್ತು ಆ ಗಳಿಗೆಯ ಸತ್ಯ ಅನ್ನಿಸುತ್ತೆ ಅಲ್ವಾ?....
ನಿಮ್ಮ
ದಿನು

ಚಿತ್ರ ಕ್ರಪೆ: ಗೂಗಲ್

1 comment:

Shilpa said...

hoi ist bega philosophy shuru madrale marre... nanganthu onchooru artha aila.. naavu arthada hudukatadalli...:):):)

chinni