ಪ್ರೀತಿಯ ಸಿಂಚನಗಳು


ಹುಚ್ಚು ಹುಡುಗನ ಬಿಚ್ಚು ಮನಸಿನ ಕದ ತಟ್ಟಿದ್ದಕ್ಕೆ.......

Thursday, March 18, 2010

Something is better than Nothing....?


ಮನದ ಬೊಗಸೆಯಲ್ಲಿ ಹುದುಗಿಟ್ಟ ಪೀತಿ, ಹ್ರದಯ ಕುಕ್ಷಿಯಲ್ಲಿ ಅಡಗಿಸಿಟ್ಟ ಸ್ನೇಹ, ಕಾಣದ ಗಳಿಗೆಯಲ್ಲಿ ಮೂಡುವ ಸಂಬಂಧ, ಯಾವುದೋ ತೀರದಲ್ಲಿ ಸ್ಪಂದಿಸುವ ಭಾವಗಳು.....ಹೀಗೆ ನೂರಾರು ಮೈಲು ದೂರದ ಬಾಳ ಪಥದ ಹೆಜ್ಜೆಗಳು. ಬದುಕಿನಲ್ಲಿ ಪಡೆದಿದ್ದೇವೆ ಎಂದುಕೊಳ್ಳುವಾಗಲೇ ಕಳೆದುಕೊಂಡದ್ದು ನೆನಪಾಗುತ್ತೆ. ಕಪ್ಪನೆಯ ಹಾಸಿನ ನಡುವೆಲ್ಲೋ ಬಿಳಿ ಕೂದಲು ತನ್ನ ಅಸ್ಥಿತ್ವ ತೋರಿಸೋಕೆ ಯತ್ನಿಸುತ್ತೆ. ನಾವು ಬಯಸಿದ ಕಾರ್ಯಗಳು ಬಯಸಿದಂತೆಯೇ ಆಗಿರುತ್ತಿದ್ದರೆ ಇಷ್ಟೆಲ್ಲಾ ದೇವಸ್ಥಾನಗಳ ಅವಶ್ಯಕತೆ ಇರುತ್ತಿತ್ತಾ ಹೇಳಿ?. ಪಡೆದದ್ದು, ಪಡೆಯಲಾಗದ್ದು, ಪಡೆಯಬೇಕೆಂದುಕೊಂಡದ್ದು....ಎಲ್ಲವೂ ವಿರಳ ಹಾದಿಯ ಪ್ರಬಲ ಪಾತ್ರಗಳು. ಬದುಕಿನ ಯಾವುದೋ ಒಂದು ದಿನ ಕೈಗೊಂಡ ನಿರ್ಧಾರ ಅಚಾನಕ್ ಫಲಿಸದೇ ಇದ್ದಾಗ ಅದರ ಒಳತಿರುವನ್ನು ಪ್ರಶ್ನಿಸುವಮ್ತವರಾಗಬೇಕು. ಆಗ ಎಲ್ಲೂ ಅಪೂರ್ಣತೆ ತಲೆ ಎತ್ತಲು ಅಸಾದ್ಯ. ಯಾಕೋ ಒಂತರಾ ವಿಚಿತ್ರ ವಾಕ್ಯಗಳನ್ನು ಜೋಡಿಸುತ್ತಿದ್ದೇನೆ ಅನ್ನಿಸುತ್ತಾ?. ಇದರ ಹಿಂದೆ ವೈಚಾರಿಕತೆಯಿದೆ, ಕಾರಣಗಳಿವೆ.


ಬದುಕಿನ ಯಾವುದೋ ಒಂದು ಕ್ಷಣ ಬದುಕನ್ನೇ ಪಡೆದಂತೆ ಇರುತ್ತೇವಲ್ಲ, ಅದು ಮುಖ್ಯ ಅನ್ನಿಸುತ್ತೆ. ಅವಸರದ ಬದುಕಿಗೆ ಅನಿವಾರ್ಯ ಎನಿಸುತ್ತೆ. ಪ್ರೀತಿ, ಸ್ನೇಹ ಒಂತರಾ ಒಂದು ನಾಣ್ಯದ ಎರಡು ಮುಖಗಳು. ಒಂದು ಇನ್ನೊಂದಾದರೆ, ಇನ್ನೊಂದು ಮೊದಲನೆಯದೆ ಆಗಿರುತ್ತೆ. ಆದರೆ ಪ್ರೀತಿಯ ಪರಾಕಾಷ್ಟೆ ಸ್ನೇಹವನ್ನು ಹಾಳು ಮಾಡಬಾರದು. ಪ್ರೀತಿ ಫಲಿಸದಿದ್ದಾಗ, ಸ್ನೇಹವನ್ನು ಮರೆಯುವುದರಲ್ಲಿ ಅರ್ಥವಿಲ್ಲ ಅನ್ನಿಸುತ್ತೆ. ಯಾವುದೇ ಒಂದು ಭಾವ ಬದುಕನ್ನು ಬಂಧಿಸಬೇಕು. ಆಗ ಹ್ರದಯಗಳು ಸ್ಪಂದಿಸಿದಂತಾಗುತ್ತೆ. ಹೊಸ ಕನಸುಗಳು ಮೊಳೆಯುತ್ತೆ. ಇದಕ್ಕೆ ಹೊರತಾಗಿ, ಹಲವು ದಿನವಿದ್ದ ಪ್ರೀತಿ ಮದುವೆಯಲ್ಲಿ ಪರ್ಯಾಪ್ತಗೊಳ್ಳದಿದ್ದಲ್ಲಿ, ಎಲ್ಲವನ್ನು ಮರೆತುಬಿಟ್ಟವರಂತೆ ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ....ಎಂಬಂತೆ ಬದುಕುವುದರಲ್ಲಿ ಅರ್ಥ ಸಿಗಲಾರದು. ಪ್ರೀತಿಯ ಭಾವ ಅಮರವಾದದ್ದು. ಪ್ರೀತಿ, ಮೂಲವನ್ನು ನೆನಪಿಸಿಕೊಂಡಾಗ ಪ್ರತಿಬಾರಿ ಪ್ರತಿಫಲಿಸುವಂತದ್ದು. ಮನಸ್ಸಿನ ಯಾವುದೋ ಮೂಲೆಯಲ್ಲಿ ನಲಿದಾಡುವಂತದ್ದು. ಇದಕ್ಕೆ ಯಾವ ವಿಷಯದ ನಿರ್ಭಂದ ಸಿಗಲಾರದು. ಮಾತು ಮೌನವಾಗಿದ್ದಾಗಲೂ ಪ್ರೀತಿ ಮಾತನಾಡುತ್ತೆ, ಹ್ರದಯ ತವಕಿಸುತ್ತೆ, ಮನಸು ಅನುರಣಿಸುತ್ತೆ, ಕಣ್ಣು ಕಾತರಿಸುತ್ತೆ, ದೇಹ ಉಲ್ಲಸಿತವಾಗುತ್ತೆ. ಹೀಗೆ ಅವ್ಯಕ್ತ ಭಾವ ಅದೇನನ್ನೋ ಬದುಕಿಗೆ ಕೊಟ್ಟಂತೆ ಅನುಭವವಾಗುತ್ತೆ.


ಬದುಕಿನಲ್ಲಿ ಯಾವ ಅಂಶವನ್ನು ಕಳೆದುಕೊಳ್ಳುವಾಗಲೂ ಅದಕ್ಕೆ ಸಂದರ್ಭಗಳೇ ಮುಖ್ಯ ಕಾರಣವಾಗಿರುತ್ತೆ. ಆದರೆ ಯಾವ ಘಟನೆಗಳೂ ಸಂಬಂಧವನ್ನು ಸಂಪೂರ್ಣ ಕಡಿದುಹಾಕಬಾರದು. ಕೊನೇ ಪಕ್ಷ ಬಲುದೂರ ಚಲಿಸಿದ ಬದುಕಿನ ಮಾರ್ಗದ ಹೆಜ್ಜೆಗಳನ್ನು ಗುರುತಿಸುವಷ್ಟಾದರೂ ವ್ಯವದಾನ ಬೇಕು.ಆಗ ಬದುಕಿನ ನೆನಪುಗಳನ್ನೆ ಮರೆತು ಬಿಡುವವರಿಗಿಂತ ಹೆಚ್ಚು ಸಂತಸ ಸಿಕ್ಕಿರುತ್ತೆ. ಎಲ್ಲೋ ಅವ್ಯಕ್ತವಾಗಿರುತ್ತೆ ಅಷ್ಟೇ!. ಹೀಗೆ ಕಳೆಯಲಾಗದ ಎಷ್ಟೋ ಸಂಬಂಧಗಳು ಪರಿಸ್ಥಿತಿಯ ಅನಿವಾರ್ಯತೆಗೆ ಸಿಕ್ಕಿ ಕಳೆದುಕೊಳ್ಳುವ ಸಂದರ್ಭ ಬಂದಾಗ ಒಂದು ಮಾತು ಸ್ಪಷ್ಟ....ಭಾವನೆಗಳು ಸಾಯಲಾರವು. ಸಂಬಂಧಗಳು ಬಿರಿಯಲಾರವು. ಅದೇ ಆರಂಭ, ಅದೇ ಚಲನೆ, ಅದೇ ಪಾರದರ್ಶಕತೆ...ಆದರೆ ಜೊತೆಗೆ ಇನ್ನೊಂದು ಭಾವ.....ಹೊಸ ಭಾವದ ಮಿಳಿತದೊಂದಿಗೆ ಹಳೆಯ ಭಾವ ಮರೆಯುವುದಕ್ಕಿಂತ, ಅದರೊಂದಿಗೆ ಹಳೆಯ ಭಾವವನ್ನು ಸೇರಿಸಿ ಬದುಕನ್ನು ಸವಿಯುವುದರಲ್ಲಿ ಹೆಚ್ಚು ಅರ್ಥವಿದೆ ಅನ್ನಿಸುತ್ತೆ. ಹೀಗಾಗಿ something is........ಅಲ್ವಾ?


ನಿಮ್ಮ

ದಿನು


ಚಿತ್ರ ಕ್ರಪೆ:ಗೂಗಲ್

3 comments:

Shilpa said...

Hoi shettre,

I Don't agree with this!!

chinni

Unknown said...

You know my comment for this know...:)I NEVER AGREE THIS...:)

Anonymous said...

My blowing thought,hardly people agree it but I do.Its like a sword which is sharp from both the side.